ಕಣ್ಣುಗಳು ಕಾಯುತಿವೆ ನಿನ್ನ ಕಾಣಲು
ಮನ ಚಡಪಡಿಸುತಿದೆ ನಿನ್ನ ಸೇರಲು,
ಕಳೆದ ಆ ಕ್ಷಣಗಳೇ ನೆನಪಾಗಿದೆ ನನಗಿಲ್ಲಿ;
ಹಿಂದಿರುಗಿ ಬಂದುಬಿಡು ಈ ಹೃದಯಕೆ
ನನ್ನ ಮನ ಕಾಯುತಿದೆ ನಿನ್ನ ಆಗಮನಕ್ಕೆ
ಪ್ರೀತಿಯ ಆ ಹೆಸರಲಿ
ನೀನಿರುವೆ ನನ್ನ ಮನದಲಿ,
ಹಿಂತಿರುಗಿ ಬಂದರೆ ನೀನು
ಹಾರುವೆ ಆಕಾಶದಲಿ ನಾನು,
ಬಂದುಬಿಡು ಒಂದುಬಾರಿ... ಕಾಯುತಿರುವೆ ಪ್ರತಿ ಬಾರಿ.
ದೇಶ ಯಾವುದಾದರೇನು
ಉಸಿರಾಡುವ ಗಾಳಿ ಒಂದೇ
ಭಾಷೆ ಯಾವುದಾದರೇನು
ಮನಸ್ಸಿನ ಭಾವನೆ ಒಂದೇ
ನುಡಿ ಯಾವುದಾದರೇನು
ನಡೆ ಒಂದೇ
ಬಟ್ಟೆ ಯಾವುದಾದರೇನು
ಉಡುಗೆ ಒಂದೇ
ಬಣ್ಣ ಯಾವುದಾದರೇನು
ನೋಟ ಒಂದೇ
ಎಲ್ಲಾವು ಒಂದೇ ಆಗಿರುವಾಗ
ಮನುಷ್ಯ ಮನುಷ್ಯರ ನಡುವೇ
ನೂರೆಂಟು ಜಾತಿ ಜನಾಂಗದ
ಅಂಟು ನಂಟು ಕುಂಟು ಇರುವುದು
ವಿಪರ್ಯಾಸವಲ್ಲವೇ
ರಾಷ್ಟ್ರದ ವಿಕಾಸಕ್ಕೆ
ಜಾತಿ ಮತ ಪಂಥಗಳ ಅಡ್ಡಿಯಾಗಬಾರದು
ದೇಶದ ಏಳ್ಗೆಗೆ ಪರಕೀಯರ ಆಶ್ರಯ ಬಯಸದೆ
ಸ್ವದೇಶದ ಶಕ್ತಿಯಲ್ಲಿ ಬೆಳೆಯಬೇಕು
ಸಾಹಿತ್ಯ-ಸಂಸ್ಕೃತಿ ಜ್ಞಾನ ವಿಜ್ಞಾನಗಳ ಕ್ಷೇತ್ರಗಳಲ್ಲಿ
ಎತ್ತರವಾಗಿ ಬೆಳೆದು ಬದುಕಬೇಕು
ಈ ತೊಗಲಿನ ದೇಹಕ್ಕೆ
ಮೂರು ದಿನದ ಸಂತೆಯಲ್ಲಿ
ನೂರು ಚಿಂತೆ ಮಾಡಿ ಸಾಯುವುದೇಕೆ
ಹುಟ್ಟಿನಿಂದ ಸಾಯುವವರೆಗೂ
ಪ್ರತಿಯೊಬ್ಬ ಭಾರತೀಯನ
ಜೀವನ ಪುಟದಲ್ಲಿ
ಒಂದಿಲ್ಲ ಒಂದು ಇತಿಹಾಸ
ಬರೆದಿಡುವಂತಾಗಬೇಕು
ಎದ್ದೆಳೀ ನವ ಯುವಕರೆ
ಭಾರತಾಂಬೆಯ ಕರೆ ಇದು
ಯಾರಿಗೂ ಬಗ್ಗದೆ ಯಾರಿಗೂ ಕುಗ್ಗದೆ
ಸಾಧನೆಯ ಚಿತ್ತ ನಿಮಗಿರಲಿ
ರಕ್ತದ ಕಣ ಕಣದಲ್ಲಿ
ರಾಷ್ಟ್ರಪ್ರೇಮ ತುಂಬಿರಲಿ
ಭಾರತ ಮಾತೆಯ ಕೀರ್ತಿ ಧ್ವಜವು
ಮುಗಿಲೆತ್ತರಕ್ಕೆ ಹಾರುತ್ತಿರಲಿ