Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಿದ್ದಲಿಂಗಯ್ಯ

ಕಟ್ಟುವರಯ್ಯ ಕಟ್ಟುವರು
ಗಲ್ಲಿ ಗಲ್ಲಿಗೊಂದು
ಕಲ್ಲು ಕಲ್ಲಿಗೊಂದು
ಗುಡಿ ಗೋಪುರಗಳ
ಆಲಯ ದೇವಲಾಯ
ಕಟ್ಟಿ ಕೆಡಗುವರಯ್ಯಾ
ಉರುಳಿಸುವರಯ್ಯಾ
ಮನೆ ಮನೆಗೊಂದು
ಹಾದಿ ಬೀದಿಯ ಕಲ್ಲಿಗೊಂದು
ಪ್ರಾಣಿ ಪಕ್ಷಿ ಬಲಿ ಜೀವ ಬಲಿ

ನೆಲೆ ಉಂಟು ಬೆಲೆ ಉಂಟು
ಮುಕ್ಕೋಟಿ ದೇವರಿಗೆ
ಆಲಯವು ಉಂಟಯ್ಯಾ
ಛಲ ಉಂಟು ಬಲ ಉಂಟು
ಕಲೆ ಉಂಟು ಬದುಕಲು
ಬದುಕಿ ಬಾಳಲು
ಮೂಲ ನೆಲೆ ಎಲ್ಲೊಂಟಯ್ಯ
ಮುಗ್ಧ ಜನಗಳ ಜೀವನವೇ
ಅಲೆ ಅಲೆ ಅಲೆದಾಟವಯ್ಯ

ಅಲೆಮಾರಿ ದೇವರಿಗೆ
ಇರುವುದಯ್ಯ
ಹೆಜ್ಜೆ ಹೆಜ್ಜೆಗೊಂದು
ಸಾಗರದಷ್ಟು ಆಲಯ
ಅಲೆದಾಡಿ ದುಡಿದು ತಿನ್ನುವ
ಮುಗ್ಧ ಜನಗಳಿಗೆ
ಇಲ್ಲವೇ ಇಲ್ಲವಯ್ಯ
ಒಂದೇ ಒಂದು ನಿಲಯ
ಈ ಮೂಢ ಮನುವಾದಿಗಳ
ಸಂತೆಯಲ್ಲಿ



- ರಾಜು ಹಾಸನ

06 Sep 2021, 10:43 pm

ಮಾಯಾವಿ

ಅಕ್ಕ ಸತ್ತಳು ಎಂದು ಮಮಕಾರ ತುಂಬಿ ಮೈ ಮರೆತು ಅತ್ತರೆ ಎಂತಣ ಮಾಯ ಲೋಕದಲಿ ಬರೀ ನಶ್ವರವಯ್ಯ

- ms

06 Sep 2021, 09:27 pm

ಓ ಚೆಲುವೆ

ಕಣ್ಣಂಚಿನ ಮಿಂಚಲ್ಲಿ
ಮನದಾಳದ ಮಡಿಲಲ್ಲಿ
ಮಿಂಚಾಗಿ ಬಂದೆ ಓ ಚೆಲುವೆ

ಹುಣ್ಣಿಮೆಯ ಚಂದಿರನ
ಬೆಳದಿಂಗಳ ಬೆಳಕಲ್ಲಿ
ಮಿಂದು ಬಂದೆ ಓ ಚೆಲುವೆ

ದುಂಡನ ಮೊಗದವಳೆ
ಮೀನಂತ ಕಣ್ಣವಳೆ
ಹಾಲುಗೆನ್ನೆಯ ಓ ಚೆಲುವೆ

ಮನದಾಳದ ಬೆಳಕಲ್ಲಿ
ಹೊಸ ಬೆಳಕು ಸೂಸುತ್ತಾ
ಬಾಳ ಬೆಳಕಿನ ಓ ಚೆಲುವೆ

ವನಸಿರಿಯ ಹಸಿರಲ್ಲಿ
ಹೊಸತನವ ತಂದವಳೇ
ಹಸಿರು ಸಿರಿಯ ಓ ಚೆಲುವೆ

ಮುಂಜಾವಿನ ಮಂಜಲ್ಲಿ
ಇಬ್ಬನಿಯ ಹನಿಯಲ್ಲಿ
ನೀರಾಗಿ ಬಂದೆ ಓ ಚೆಲುವೆ

ಹೂವಿನ ಹಾಸಿಗೆಯಲ್ಲಿ
ಪರಿಮಳ ಸೂಸುವ
ಮುದ್ದಾದ ಹೂವೇ ಓ ಚೆಲುವೆ

ದುಂಬಿಯ ಗಾನದಲ್ಲಿ
ಹೊಸ ರಾಗ ಹಾಡುವ
ಪ್ರೇಮದ ಗಿಣಿಯೆ ಓ ಚೆಲುವೆ


- shankar gargi

04 Sep 2021, 11:28 am

ಕಷ್ಟ ಅಸಾಧ್ಯವಾದದ್ದು

ಜೀವವಿಲ್ಲದ ಕಲ್ಲಗೆ
ಮಂತ್ರ ತಂತ್ರ ಪಠಿಸಿದರೆ
ಜೀವವಿಲ್ಲದ ಕಲ್ಲಿಗೆ
ಜೀವ ಬರುವುದಾದರೆ
ಕಲ್ಲು ದೇವರಾಗುವುದದಾರೆ
ಸತ್ತವರಿಗೆ ಚಟ್ಟ ಕಟ್ಟವುದು ಏತಕೆ
ಅತ್ತು ಕರೆದರು
ಮರಳಿ ಬಾರದಿರುವುದು
ಹೋದ ಜೀವ
ಮರಳಿ ಗೂಡಿಗೆ ಏತಕೆ

ಜೀವವಿಲ್ಲದ ಕಲ್ಲು
ಉಸಿರು ನಿಂತ ಹೆಣ
ಎರಡು ಒಂದೇ
ಜೀವವಿಲ್ಲದ ಕಲ್ಲಿಗೆ
ಜೀವ ತುಂಬುವುದು ಒಂದೇ
ಉಸಿರು ನಿಂತ ಹೆಣಕ್ಕೆ
ಉಸಿರು ತುಂಬುವುದು ಒಂದೇ
ಇದು ಕಷ್ಟ ಅಸಾಧ್ಯವಾದದ್ದು

- ರಾಜು ಹಾಸನ

04 Sep 2021, 12:18 am

ಮಾಯಾವಿ ಪ್ರೀತಿ...

ನಿನ್ನ ಪ್ರೀತಿ ಸಿಕ್ಕ ಖುಷಿಯಲಿ ಏನೇನೋ
ಕನಸುಗಳನ್ನು ಕಟ್ಟಿಕೊಂಡು ಖುಷಿಪಡುತ್ತಿದ್ದೆ....
ನೀ ತೋರಿಸಿದ ಪ್ರೀತಿ , ಕಾಳಜಿಗೆ ನಾ ನನ್ನನ್ನೆ
ಒಂದು ಕ್ಷಣ ಮರೆಯುತ್ತಿದ್ದೆ.....
ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ ನನ್ನ
ಪ್ರೀತಿಯಲ್ಲಿ ಏನೋ ಕೊರತೆ ಇರಬೇಕು ಅದಕ್ಕೆ
ನಿನು ಪ್ರೀತಿಸುದನ್ನೆ ಮರೆತು ಬಿಟ್ಟೆ.....
ಖುಷಿಯಲ್ಲಿ ತೆಲುತ್ತಿದ್ದ ಮನಸ್ಸಿಗೆ ಒಮ್ಮೆಲೆ
ಆಘಾತ ಮಾಡಿಬಿಟ್ಟೆ.....
ಎಮ್.ಎಸ್.ಭೋವಿ...✍️

- mani_s_bhovi

03 Sep 2021, 10:45 pm

ನೈಜತೆ

ಮನುವಾದಿಗಳು
ಪೂಜಿಸಲಿ ಆರಾಧಿಸಲಿ
ಊರ ಮುಂದಿನ ಕಲ್ಲ ಕಂಬವ
ನೆತ್ತಿಯ ಮೇಲೆ ಹೊತ್ತು ಸಾಗಲಿ
ಮೂಢರು ಹಾಡಿ ಕೊಂಡಾಡಲಿ
ಬಿದ್ದು ಬೇಡಲಿ ಕಲ್ಲ ಕಂಬವ
ಮನೆಯ ದೇವರೆಂದು
ಉಘೇ ಉಘೇ ಎಂದರು
ನನಗೆ ನನ್ನ‌ ಹೆತ್ತವರೇ
ನನ್ನ ಮನದ ಮನೆಯ ದೇವರು
ಮೂಢರಿಗೆ ಕಲ್ಲು ದೇವರೇ
ಬಂಧು ಮಿತ್ರನಾದರೆ
ನನಗೆ ನನ್ನ ಹೆತ್ತವರಿಗಿಂತ
ಮಿಗಿಲಾದ ಯಾವ ಬಂಧು ಬಳಗ
ಯಾವ ದೇವರು ಇಲ್ಲ.......

- ರಾಜು ಹಾಸನ

29 Aug 2021, 11:59 pm

"ನಿನ್ನ ನೆನಪೇ ಕಾಡಿದೆ ಈ ಘಳಿಗೆ"

ನೋವಾಗಿದೆ ಎದೆಯೊಳಗೆ
ನೀ ಇಲ್ಲದ ಈ ಘಳಿಗೆ...!!!
ಯಾರು ಇಲ್ಲದ ಮನದೊಳಗೆ
ನೀ ಬಂದೆ ಈ ಘಳಿಗೆ....
" ನೀ ಬಂದೆ ಎದೆಯೊಳಗೆ ❤️"
ನೀ ಮಾಡಿದ ಗಾಯ ನನ್ನೊಳಗೆ...
ಮಧುರವಾಗಿದೆ

- mani_s_bhovi

29 Aug 2021, 02:49 pm

ಗೆಳತಿಯ ಸವಿನೆನಪು

ನನ್ನ ಬಾಳ ಪಯಣದ ಹಾದಿಯಲ್ಲಿ
ನಿನ್ನ ಪ್ರೀತಿಯ ದೋಣಿಯಲ್ಲಿ
ನೂರಾರು ಕನಸುಗಳ ಕಲ್ಪನೆಯಲ್ಲಿ
ಸಾಗಿ ನೆಡೆಯುತ್ತಿರುವೇ ನಾ ಇಲ್ಲಿ

ಅಂದ ಚೆಂದದ ನೆನಪಿನಲ್ಲಿ
ಧುಮ್ಮಿಕ್ಕಿ ಹರಿಯುವ
ಕಣ್ಣೀರ ಬಿಂದುವಿನಲ್ಲಿ
ನಿನ್ನ ಪ್ರತಿಬಿಂಬ ಹುಡುಕುತ್ತಲ್ಲಿ
ಅಲೆದಾಡುತ್ತಿರುವೆ ನಾ ಇಲ್ಲಿ

ನನ್ನ ಮನದ ಅಂಗಳದಲ್ಲಿ
ನಿನ್ನ ಪ್ರೀತಿಯ ತೇರಿನಲ್ಲಿ
ಕೂಡಿ ಬಾಳುವ ಆಸೆ ಹೊತ್ತು
ಕಾದು ಕುಳಿತ್ತಿರುವೆ ನಾ ಇಲ್ಲಿ



- ರಾಜು ಹಾಸನ

29 Aug 2021, 12:48 am

ಜೀವನ

ನನ್ನಜೀವನದಲ್ಲಿ ನನಗೆ
ನಿರೀಕ್ಷೆಗಳೆ ಜಾಸ್ತಿ
ಅದರೆ ದೇವರು ಆಟದಲ್ಲಿ
ಪರಿಕ್ಷಗಳೆ ಜಾಸ್ತಿ

- dhanya

27 Aug 2021, 12:15 pm

ಇನ್ನೇನೈತಿ

ಒಂಟಿ ಮಾಡಿ ಹೊರಟ ನಿಂತೆಲ್ಲೋ
ಸುಡಗಾಡಕ್ಕ ಒಂಟಿ ಮಾಡಿ
ಹೊರಟ ನಿಂತೆಲ್ಲೋ

ಎಲ್ಲಾವ ಇಲ್ಲೇ ಬಿಟ್ಟು
ಹೊಂಟಿಯಲ್ಲೋ ಸುಡುಗಾಡಕ್ಕ
ಒಂಟಿಯಾಗಿ ಬಂದು
ಒಂಟಿಯಾಗಿ ಹೊಂಟಿಯಲ್ಲೋ

ಎತ್ತುವರು ನಿನ್ನ ನಾಲ್ಕು ಹೆಗಲಮ್ಯಾಲ
ಬೆನ್ನಟ್ಟಿ ಬರುವರು ನಿನ್ನ
ಸುಡುಗಾಡು ಸೇರೋತನಕ
ಸುಡುವರೋ ನಿನ್ನ ಬೂದಿಯಾಗುವ ತನಕ

ಹುಟ್ಟಿದಮ್ಯಾಲ ಸಾಯುವುದು ಒಂದು ದಿನ
ಸತ್ತಮ್ಯಾಲ ಇನ್ನೇನೈತಿ
ಸುಡುಗಾಡು ಸೇರೋದೈತಿ
ಮುಗಿದೈತಿ ನಿಂದ ಚಿಂತಿ

ಒಳ್ಳೆಯದು-ಕೆಟ್ಟದ್ದು
ಬರುವುದು ಬೆನ್ನತ್ತಿ
ಮುಗೀತು ಇನ್ನೇನೈತಿ
ಮಾಡುವರು ಮುಂದಿನ ಚಿಂತಿ

- shankar gargi

25 Aug 2021, 08:45 am