ಕಟ್ಟುವರಯ್ಯ ಕಟ್ಟುವರು
ಗಲ್ಲಿ ಗಲ್ಲಿಗೊಂದು
ಕಲ್ಲು ಕಲ್ಲಿಗೊಂದು
ಗುಡಿ ಗೋಪುರಗಳ
ಆಲಯ ದೇವಲಾಯ
ಕಟ್ಟಿ ಕೆಡಗುವರಯ್ಯಾ
ಉರುಳಿಸುವರಯ್ಯಾ
ಮನೆ ಮನೆಗೊಂದು
ಹಾದಿ ಬೀದಿಯ ಕಲ್ಲಿಗೊಂದು
ಪ್ರಾಣಿ ಪಕ್ಷಿ ಬಲಿ ಜೀವ ಬಲಿ
ನೆಲೆ ಉಂಟು ಬೆಲೆ ಉಂಟು
ಮುಕ್ಕೋಟಿ ದೇವರಿಗೆ
ಆಲಯವು ಉಂಟಯ್ಯಾ
ಛಲ ಉಂಟು ಬಲ ಉಂಟು
ಕಲೆ ಉಂಟು ಬದುಕಲು
ಬದುಕಿ ಬಾಳಲು
ಮೂಲ ನೆಲೆ ಎಲ್ಲೊಂಟಯ್ಯ
ಮುಗ್ಧ ಜನಗಳ ಜೀವನವೇ
ಅಲೆ ಅಲೆ ಅಲೆದಾಟವಯ್ಯ
ಅಲೆಮಾರಿ ದೇವರಿಗೆ
ಇರುವುದಯ್ಯ
ಹೆಜ್ಜೆ ಹೆಜ್ಜೆಗೊಂದು
ಸಾಗರದಷ್ಟು ಆಲಯ
ಅಲೆದಾಡಿ ದುಡಿದು ತಿನ್ನುವ
ಮುಗ್ಧ ಜನಗಳಿಗೆ
ಇಲ್ಲವೇ ಇಲ್ಲವಯ್ಯ
ಒಂದೇ ಒಂದು ನಿಲಯ
ಈ ಮೂಢ ಮನುವಾದಿಗಳ
ಸಂತೆಯಲ್ಲಿ
ಜೀವವಿಲ್ಲದ ಕಲ್ಲಗೆ
ಮಂತ್ರ ತಂತ್ರ ಪಠಿಸಿದರೆ
ಜೀವವಿಲ್ಲದ ಕಲ್ಲಿಗೆ
ಜೀವ ಬರುವುದಾದರೆ
ಕಲ್ಲು ದೇವರಾಗುವುದದಾರೆ
ಸತ್ತವರಿಗೆ ಚಟ್ಟ ಕಟ್ಟವುದು ಏತಕೆ
ಅತ್ತು ಕರೆದರು
ಮರಳಿ ಬಾರದಿರುವುದು
ಹೋದ ಜೀವ
ಮರಳಿ ಗೂಡಿಗೆ ಏತಕೆ
ಜೀವವಿಲ್ಲದ ಕಲ್ಲು
ಉಸಿರು ನಿಂತ ಹೆಣ
ಎರಡು ಒಂದೇ
ಜೀವವಿಲ್ಲದ ಕಲ್ಲಿಗೆ
ಜೀವ ತುಂಬುವುದು ಒಂದೇ
ಉಸಿರು ನಿಂತ ಹೆಣಕ್ಕೆ
ಉಸಿರು ತುಂಬುವುದು ಒಂದೇ
ಇದು ಕಷ್ಟ ಅಸಾಧ್ಯವಾದದ್ದು
ನಿನ್ನ ಪ್ರೀತಿ ಸಿಕ್ಕ ಖುಷಿಯಲಿ ಏನೇನೋ
ಕನಸುಗಳನ್ನು ಕಟ್ಟಿಕೊಂಡು ಖುಷಿಪಡುತ್ತಿದ್ದೆ....
ನೀ ತೋರಿಸಿದ ಪ್ರೀತಿ , ಕಾಳಜಿಗೆ ನಾ ನನ್ನನ್ನೆ
ಒಂದು ಕ್ಷಣ ಮರೆಯುತ್ತಿದ್ದೆ.....
ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ ನನ್ನ
ಪ್ರೀತಿಯಲ್ಲಿ ಏನೋ ಕೊರತೆ ಇರಬೇಕು ಅದಕ್ಕೆ
ನಿನು ಪ್ರೀತಿಸುದನ್ನೆ ಮರೆತು ಬಿಟ್ಟೆ.....
ಖುಷಿಯಲ್ಲಿ ತೆಲುತ್ತಿದ್ದ ಮನಸ್ಸಿಗೆ ಒಮ್ಮೆಲೆ
ಆಘಾತ ಮಾಡಿಬಿಟ್ಟೆ.....
ಎಮ್.ಎಸ್.ಭೋವಿ...✍️
ಮನುವಾದಿಗಳು
ಪೂಜಿಸಲಿ ಆರಾಧಿಸಲಿ
ಊರ ಮುಂದಿನ ಕಲ್ಲ ಕಂಬವ
ನೆತ್ತಿಯ ಮೇಲೆ ಹೊತ್ತು ಸಾಗಲಿ
ಮೂಢರು ಹಾಡಿ ಕೊಂಡಾಡಲಿ
ಬಿದ್ದು ಬೇಡಲಿ ಕಲ್ಲ ಕಂಬವ
ಮನೆಯ ದೇವರೆಂದು
ಉಘೇ ಉಘೇ ಎಂದರು
ನನಗೆ ನನ್ನ ಹೆತ್ತವರೇ
ನನ್ನ ಮನದ ಮನೆಯ ದೇವರು
ಮೂಢರಿಗೆ ಕಲ್ಲು ದೇವರೇ
ಬಂಧು ಮಿತ್ರನಾದರೆ
ನನಗೆ ನನ್ನ ಹೆತ್ತವರಿಗಿಂತ
ಮಿಗಿಲಾದ ಯಾವ ಬಂಧು ಬಳಗ
ಯಾವ ದೇವರು ಇಲ್ಲ.......