Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೋವು ನಲಿವಿನ
ಕಣ್ಣ ಮುಚ್ಚಾಲೆ ಆಟವ
ಕ್ಷಣಾರ್ಧದಲ್ಲಿ ಮರೆತು
ಕಳೆಯಬವುದಯ್ಯ ಕಾಲ
ಆದರೆ ಹೆತ್ತು ಹೊತ್ತು ಸಾಕಿದ
ತಂದೆ ತಾಯಿಯ ಮರೆತು
ಬದುಕುವುದು ಉಂಟೇ
ನನ್ನೆದೆಯ ಗುಂಡಿಗೆಯಲ್ಲಿ
ಪ್ರೀತಿ ತುಂಬಿದ ಗೆಳತಿಯ
ನೆನಪುಗಳು ಎಂದೂ ಎಂದೆಂದಿಗೂ
ಬಾರದಿರುವುದುಂಟೆ
ವಿಧ್ಯೆ ಕೊಟ್ಟ ಗುರು
ಜೀವನದಲ್ಲಿ ಕಲಿತ ಪಾಠ
ಎಂದಾದರೂ ಮರೆತು
ಕಾಲ ಕಳೆಯುವುದು ಉಂಟೇ
- ರಾಜು ಹಾಸನ
22 Sep 2021, 10:58 pm
"ಅರ್ಥ ಮಾಡಿಕೊಳ್ಳುವ ಸಮಯದಲ್ಲಿ ಅಪರ್ಥ ಮಾಡಿಕೊಂಡು, ಅರ್ಥವಾದ ಮೇಲೆ ಮರುಗಿದರೆ ಏನು ಪ್ರಯೋಜನವಿಲ್ಲ
"ಮನುಷ್ಯನ 'ಅಹಂಕಾರ' ಕರಗುವುದು ಎರಡೇ ಸಲ, ಒಂದು ಎಲ್ಲವನ್ನು ಕಳೆದುಕೊಂಡಾಗ, ಇನ್ನೊಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವಾಗ."
"ಸಿಟ್ಟು ಮಾಡಿಕೊಳ್ಳುವುದೆಂದರೆ ವಿಷ ನಾವು ಕುಡಿದು ಇನ್ನೊಬ್ಬರು ಸಾಯಲಿ ಎಂದು ಆಶಿಸಿದಂತೆ"
- manoj
22 Sep 2021, 09:56 pm
ಕಿತ್ತು ತಿನ್ನುವ
ಬಡತನವಿದ್ದರೂ
ಕಣ್ಣ್ ಮುಚ್ಚಿ
ಮಣ್ಣಾಗುವ ತನಕ
ಹೊಟ್ಟೆ ಬಟ್ಟೆ ಕಟ್ಟಿ
ಗಂಜಿ ನೀರು ಕುಡಿದು
ಬದುಕು ದುಡಬವುದಾದರು
ಬಡವರ ಹೆಣ್ಣು ಮಣ್ಣು
ಹೊನ್ನು ಕಂಡರೆ
ಕುಕ್ಕಿ ಕುಕ್ಕಿ ತಿನ್ನುವ
ರಣ ಹದ್ದು ನರ ರಾಕ್ಷಸರೇ
ತುಂಬಿ ತುಳುಕುತ್ತಿರುವ
ಈ ಸಮಾಜದಲ್ಲಿ
ಬದುಕು ಕಟ್ಟುವುದು
ಹೇಂಗಯ್ಯ ಹೇಗಯ್ಯ
ದೇವರಂತೆ ದೇವರು
ಏನು ದೇವರೋ
ಯಾಂತ ದೇವರೋ
ಮುಗ್ಧ ಕಂದಮ್ಮಗಳ
ಮಾರುಣ ಹೋಮವೇ
ನೆಡೆಯುತ್ತಿದ್ದರು
ನೋಡಿ ಕಣ್ಣ್ ಮುಚ್ಚಿ ಕುಳಿತಿರುವ
ದೇವರು ಒಂದು ದೇವರ ?
ಓ ಮುಗ್ಧ ಜನಗಳೇ
ಏಳಿರಿ ಏಳಿರಿ ಏದ್ದೆಳಿರಿ
ಮೌಢ್ಯತೆಯಿಂದ ಹೊರಬಂದು
ನರ ರಾಕ್ಷಸರ ರುಂಡ ಮುಂಡವಾ
ಚಂಡಾಡಿರಿ ಚಂಡಾಡಿರಿ
- ರಾಜು ಹಾಸನ
15 Sep 2021, 01:07 am
ಮನಸೇ ನೀ ಹೇಳು
ಏಕೆ ಜಾರಿದೆ ಪ್ರೀತಿಗೆ
ಓ ಮನಸೇ,ಓ ಮನಸೇ, ಓ ಮನಸೇ..
ಹೂವಿನಂತ ಪ್ರೀತಿಗೆ
ಜೇನಿನಂತ ಸವಿಯ ನೀಡಿ
ಸವಿಜೇನು ಹೊಳೆಗೆ
ಈ ಮನಸು ಸೋತಿದೆ.
ಮನಸಿನಾಳದ ಪ್ರೀತಿ
ಹೊಸ ಪರಿಮಳ ಸೂಸಿ
ಮಧುರ ಗಾನದಲ್ಲಿ ತೇಲಿ
ಈ ಮನಸು ಸೋತಿದೆ.
ಹುಚ್ಚು ಮನಸಿನ ಪ್ರೀತಿ
ಹುಚ್ಚು ಕನಸಿನ ಪ್ರೀತಿ
ಮನಸ್ಸು ಮನಸ್ಸಿನ ಪ್ರೀತಿಗೆ
ಈ ಮನಸ್ಸು ಸೋತಿದೆ.
ಕತ್ತಲೆಗೆ ಬೆಳಕನು ಚೆಲ್ಲಿ
ಬದುಕಿಗೆ ದಾರಿ ತೋರಿ
ದಾರಿ ನಡೆಸೋ ಪ್ರೀತಿಗೆ
ಈ ಮನಸು ಸೋತಿದೆ.
- shankar gargi
14 Sep 2021, 05:25 pm
ಬರೆಯುವ ಮನಸ್ಸಿಲ್ಲ....
ಹುಡುಕಲು ಪದವಿಲ್ಲ....
ನನ್ನಲ್ಲಿ ಉಳಿದಿರುವು
ನಿನ್ನ ನೆನಪುಗಳಿಗೆ ಸಾವಿಲ್ಲ...
ನಾನೇಕೆ ಹಿಗಾದೆ ಎಂದು ನನಗೆ ಅರಿವಿಲ್ಲ....
ನನ್ನಷ್ಟು ನಿನ್ನ ಪ್ರೀತಿಸು ಭಗ್ನ ಪ್ರೇಮಿ
ನಿನಗೆ ಸಿಗುವುದಿಲ್ಲ....
ನನ್ನ ಪ್ರೀತಿಗೆ ಎಂದೂ ಕೋನೆಯಿಲ್ಲ....
ನಿನ್ನ ಮರೆಯುವ ಮಾತಿಲ್ಲ...
ನಿನ್ನ ಬಿಟ್ಟು ಬೇರೇನೂ ಬೇಕಿಲ್ಲ....
ಈಗ ಸಾವು ನನ್ನೆದುರೂ ಬಂದರು
ನನಗೆ ಭಯವಿಲ್ಲ...
" ಕೊನೆಯದಾಗಿ ಕೇಳಿಕೊಳ್ಳುವೆ
ಹೇಳಿ ಹೋಗು ಕಾರಣ "
ಎಮ್.ಎಸ್.ಭೋವಿ.....✍️
- mani_s_bhovi
14 Sep 2021, 10:37 am
ಜ್ಞಾನವಿರಲಿ ಶಿರದೊಳಗೆ
ಶುದ್ಧವಿರಲ್ಲಿ ಮನದೊಳಗೆ
ಸಂಸ್ಕಾರವಿರಲಿ ಸಂಸಾರದೊಳಗೆ
ಆಚಾರಣೆ ಇದ್ದರು ಇರಲಿ
ಮನುಜನ ಮನೆಯೊಳಗೆ
ಮೂಢ ನಂಬಿಕೆ ಇಲ್ಲದಿರಲಿ
ಮನುಜನ ಮನದೊಳಗೆ
ಅನ್ಯಾಯ ಅನಾಚಾರಗಳಿಗೆ
ಜಾಗವೇ ಇಲ್ಲದಿರಲಿ
ಈ ಜಗದ ಜಗದೊಳಗೆ
ಶ್ರದ್ಧೆ ಇರಲಿ ಕಾಯಕದಲ್ಲಿ
ಕರುಣೆ ಇರಲಿ ಹೃದಯದಲ್ಲಿ
ಸಹನೆ ಇರಲಿ ಜೀವದಲ್ಲಿ
- ರಾಜು ಹಾಸನ
13 Sep 2021, 10:34 pm
ಗುಣವಿಲ್ಲದ ದೇಹಕ್ಕೆ ಅಲಂಕಾರವೇತಕೆ
ಜೀವವಿಲ್ಲದ ದೇಹಕ್ಕೆ ಸಿಂಗಾರವೇತಕೆ
ಜೀವನದ ಗಂಧ ಗಾಳಿ ತಿಳಿಯಾದ
ಕಲ್ಲಿಗೆ ಪೂಜೆ ಪುನಸ್ಕಾರವೇತಕೆ
ಸಂಸಾರದ ಅರಿವಿಲ್ಲದ ಸನ್ಯಾಸಿಗೆ
ಸಂಸಾರವೇತಕೆ
ಗುರಿ ಇಲ್ಲದವನಿಗೆ ಗುರು ಏತಕೆ
ಛಲವಿಲ್ಲದವನಿಗೆ ಜ್ಞಾನವೇತಕೆ
ಮನುಜನೇ ತಿದ್ದಿ ತೀಡಿದ ಗೊಂಬೆಗೆ
ಬಿದ್ದು ಬೇಡುವನಯ್ಯ ಮನುಜ
ಇವನೇನು ಮುಗ್ಧನೋ ಮೂಢನೋ
ಒಂದು ತಿಳಿಯಾದಯ್ಯ
ಆತ್ಮವಿಲ್ಲದ ಮಣ್ಣು ಕಲ್ಲಿನ ಗೊಂಬೆ
ಪರಮಾತ್ಮನಾಗುವುದದಾರೇ
ಅದೇ ಗೊಂಬೆಗಳನ್ನು ಸೃಷ್ಟಿಸಿದ
ಮನುಜ ದೇವಾತ್ಮನಲ್ಲವೇ
- ರಾಜು ಹಾಸನ
12 Sep 2021, 11:57 pm
ಜ್ಞಾನಕ್ಕಿಲ್ಲ ಅಂತರ ತಾರತಮ್ಯ
ಜಾತಿಗೆ ಇರುವುದು ನಿರಂತರ ಅಂತರ
ಜ್ಞಾನವೆಂಬುದು ಜಾತಿಯ ಜಗುಲಿಯಲ್ಲ
ಜನರ ಮನದಲ್ಲಿನ ಬೇಳಕಯ್ಯ
ಜಾತಿ ಎಂಬುದು ಕರಿನೆರಳಾದರೆ
ಜ್ಞಾನ ಎಂಬುದು ದಿವ್ಯಜ್ಯೋತಿಯಯ್ಯ
ಸಿರಿವಂತಿಕೆ ಸಿರಿವಂತರ ಸಿರಿತನವಲ್ಲ
ಶ್ರಮಿಕರ ಶ್ರಮದ ಫಲವಯ್ಯ
ಜಾತಿ ಮತಗಳ ಆಚರಣೆ
ಮೂಢ ಜನಗಳಿಗೆ ಸಂಭ್ರಮಾಚರಣೆ
ಮುಗ್ಧ ಜನಗಳ ಹಸಿವಿನ ಆಚರಣೆ
ಮನುವಾದಿಗಳಿಗೆ ವಿಜೃಂಭಣೆಯ ಆಚರಣೆ
- ರಾಜು ಹಾಸನ
12 Sep 2021, 12:14 am
ನಿನ್ನ ಒಂದು ಕರೆಗಾಗಿ ಕಾಯುವ ಶಬರಿಯಂತಾಗಿರುವೆ,
ನಿನ್ನ ಧ್ವನಿ ಕೇಳಲು ಕಾತುರದಿ ಕಾಯುತಿರುವೆ,
ಬಂದರೆ ನಿನ್ನ ಕರೆ,
ಮೂಡುವುದು ನನ್ನ ಮುಖದಲ್ಲಿ ಮಂದಹಾಸದ ಗೆರೆ.
- Veena
10 Sep 2021, 07:25 pm
ಕುದಿಯುವ ನೀರಿನೊಳಗಿನ
ಕುಳ್ ಮುಟ್ಟಿ ತಿಳಿದವರುಂಟಯ್ಯಾ
ಮನುಜನ ಮನದ ಮರ್ಮವ
ತಿಳಿದವರು ಯಾರ್ ಉಂಟಯ್ಯಾ
ದೇವರ ಗುಡಿಯಲ್ಲಿ
ದೇವರು ಇರುವುದೋ ಇಲ್ಲ
ದೆವ್ವವು ಇರುವುದೋ
ಕಂಡು ಬಲ್ಲವರು
ಯಾರ್ ಇರುವರಯ್ಯ ಈ ಜಗದಲ್ಲಿ
ಸತ್ತವನು ಸಾವವಾಗುವನೆ ಹೋರೆತು
ಮಾಯವಿಯಾಗಲಾರ ಹಾಗೆಯೇ
ಸತ್ತ ಕಲ್ಲು ಕೆತ್ತಿದ್ದಾರೆ
ಮೂರ್ತಿಯಾಗುವುದೇ ಹೋರೆತು
ದೇವರಾಗಲಾರದಯ್ಯ
ಸಮಾನತೆ ಇಲ್ಲದ ಸಮಾಜಕ್ಕಿಂತ
ನೆಮ್ಮದಿ ಇಲ್ಲದ ಊರಿಗಿಂತ
ಜಾತಿ ಮತದ ಮಂತ್ರ ತಂತ್ರದ
ಕುತಂತ್ರದ ದೇವರ ಗುಡಿಗಿಂತ
ನಿಶ್ಯಬ್ಧದ ಗೂಡು ಸಮಾನತೆಯ ಸುರು
ಆತ್ಮಗಳ ತವರೂರು ಸ್ಮಶಾನವು
ದೇವಾ ಲೋಕಕ್ಕಿಂತ ಮಿಗಿಲ್ಲಲ್ಲವೇ
- ರಾಜು ಹಾಸನ
10 Sep 2021, 12:34 am