ಮನದಂಗಳದಿ ನೀವು ಪಡೆದು ಪೂಜಿಸಿದ ವೃತ್ತಿ,
ಸದಾ ಬಯಸುವುದು ನಿಮ್ಮಿಂದ ಕಲ್ಯಾಣ ಕಾರ್ಯಗಳ ಪಂಚಾಯ್ತಿಯ ಪ್ರಗತಿ.
ಭ್ರಾತೃತ್ವದ ದುಡಿಮೆಗೆ ಸಾಕ್ಷಿಯಾದ ನಿಮ್ಮ ಸಹಾನುಭೂತಿ ಸಹಕಾರ ತತ್ವ,
ಹಸಿರು ತುಂಬಿದ ಅಮೃತ ವನದಲ್ಲಿ
ಸಂಚರಿಸುವ ಜನರ ಹೃದಯಗಳು
ಪ್ರಶಾಂತತೆಯ ಸವಿಯ ಸವಿಯುತ
ಆಚರಿಸುತ್ತಿವೆ ಹಬ್ಬದ ಉತ್ಸವ.
ವಿಶ್ರಾಂತಿ ಬಯಸದ ನಿಮ್ಮ ಕಾಯಕ,
ಬಾನಂಗಳದಿ ಬೆಳಗುತಿದೆ
ಅಮೃತ ಗ್ರಾಮ ಪಂಚಾಯ್ತಿ ಎಂಬ ಹೆಸರಿನ ಫಲಕ.
ಸೂಕ್ಷ್ಮದಿ ಸಮಸ್ಯೆಯನರಿತು ಸರಳತೆಯಲ್ಲಿ ಜನಮನಕೆ ಸ್ಪಂದಿಸುವ ನಿಮ್ಮ ಸ್ನೇಹ ಸ್ವಭಾವ,
ಜನರ ಮನಗಳು ನೆನೆಯುವಂತೆ ಮಾಡಿದೆ ನೀವು ಕೊರತೆ ನೀಗಿಸಿರುವ ಕ್ಷಣವ.
ನಿಮ್ಮ ನೈಪುಣ್ಯತೆ ಜ್ಞಾನದಿಂದ ಗ್ರಾಮಗಳ ಸಮೃದ್ಧಿ ಗೊಳಿಸಲು ನೀವು ಕೈಗೊಂಡ ಕಾರ್ಯತಂತ್ರಗಳ ನೀತಿ,
ಸ್ಪೂರ್ತಿಯಾಗಿದೆ ನಮ್ಮೆಲ್ಲರಿಗೂ
ನಿಮ್ಮನ್ನ ಸರ್ಕಾರ ಆಮಂತ್ರಿಸಿರುವ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ.
ಹುಟ್ಟಿಗೊಂದು ಅದೃಷ್ಟ
ನಲಿವಿಗೊಂದು ಬಾಲ್ಯ
ಕಲಿಕೆಗಾಗಿ ವಿದ್ಯೆ
ಗೆಲಿವಿಗೊಂದು ಪ್ರಯತ್ನ
ಬಾಳಿಗೊಂದು ಸ್ಫೂರ್ತಿ
ನೆನಪಿಗೊಂದು ಕಾರಣ
ಚಿಂತೆಗೊಂದು ಯೌವನ
ಪಡೆಯೊಂದು ಹುದ್ದೆ
ಜೀವನಕ್ಕೊಂದು ಸಂಗಾತಿ
ನೋವಿಗೊಂದು ಸಮಸ್ಯೆ
ಮುಪ್ಪಿಗೊಂದು ಚಿಂತೆ
ಕೊನೆಗೆ ದೇಹಕ್ಕೊಂದು ಚಿತೆ!!
#ಆಶಾ#
ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸು
ನಿನ್ನನ್ನೇ ಕೋರಿದೆ,,
ಈ ಹೃದಯಕ್ಕೆ
ಬಂದು ಬಿಡು ಇಷ್ಟ ಇದ್ದರೆ ಇಲ್ಲವಾದರೆ ನಾನು ಒಟ್ಟಿಯಾಗಿ ಇರೋವೆ ನಿನ್ನ ಪ್ರೀತಿ ನ ಕಾಯುತ್ತ ನೀ
ಸಿಗೋವರೆಗೂ
ನನ್ನ ಪ್ರೀತೀ ನಿಷ್ಕಲ್ಮಶ ಪ್ರೀತಿಯಾದರೆ ಮತ್ತೊಂದು ಬಾರಿ ದೇವರು ನನ್ಗೆ ಜನ್ಮ ಕೊಟ್ಟರೆ ಆ ಲ್ಲಿಯೂ ನಿನ್ನ ಪ್ರೀತಿಗಾಗಿ ಕಾಯುತ್ತ ಇರುತ್ತೇನೆ
ಇಷ್ಟ ಇದ್ದಾರೆ ಹೇಳು ನಾನು ನಿನಗಾಗಿ ಈ ಪುಟ್ಟ ಬಡಪಾಯಿ ಮನಸ್ಸಿನಲ್ಲಿ ಪ್ರೀತಿಯ ಗುಡಿಸಲನ್ನೆ ಕಟ್ಟಿರುವೆ...