ಸೂರ್ಯನುದಯಕೆ
ಗೂಡಿನಿಂದ ಹೊರಬಂದ ಹಕ್ಕಿಗಳು,
ಚ್ಯುಂಯಿಗುಟ್ಟುತ್ತಾ ಬಾನಂಗಳಕ್ಕೆ ನೆಗೆದು,
ಹೊರಟಿವೆ ನೋಡು ನಾಳಿನ ಚಿಂತೆಯಿಲ್ಲದೆ,
ಇಂದಿನ ಉದರವ ತುಂಬುವ ತವಕದಿ.
- ಅರುಣಕುಮಾರ ಮ ಜೇವರಗಿ
22 Dec 2021, 05:08 pm
ರಕ್ತ ಸಂಬಂಧಿಯಾದರೂ ನೀ
ನಾ ಯೋಚಿಸಲಿಲ್ಲ ನೀ ಯಾರೆಂದು
ಅದರ ಅವಶ್ಯಕತೆ ಇರಲಿಲ್ಲ ನನಗಂದು..
ನಾ ನನ್ನವನು ಯಾರೋ ಎಲ್ಲೋ ಇಹನು
ಎಂಬಂತೆ ನನ್ನ ಪಾಡಿಗೆ ನಾ ಇರಲು,,
'ನಿನಗೆ ನಾನು ' ಎಂದು ಸರಿದೂಗಿ ಜೀವನದ ಮಹತ್ತರ ನಿರ್ಧಾರ ಹೆತ್ತವರು ಹೇಳಲು !!!!!
ಅಂದು ನೂರೆಂಟು ಪ್ರಶ್ನೆ, ಒಂದಿಷ್ಟು ಗೊಂದಲ,
ಹೇಗೋ!ಏನೋ!ಎಂತೋ! ನಿನ್ನ ಮನದಾಳ ಎಂಥದ್ದು? ನನ್ನ ಗುಣಕ್ಕೆ ಜೊತೆಯಾಗುವನೇ ??
ನನ್ನ ಭಾವನೆಗಳಿಗೆ ಸ್ಪಂದಿಸುವನೇ ??
ನನ್ನಾಸೆಗಳಿಗೆ ನೀರೆರೆದು ಪೋಷಿಸುವನೆ ??
ಹೀಗೆ ಪ್ರಶ್ನೆಗಳ ಗುಂಪು ಸಾಲು ಸಾಲು ನಿಂತಿತ್ತು.
ಬೇಡವೆಂದೇ ನಿನ್ನ ಆಗಮನ ನನ್ನ ಜೀವನದಲೀ
ಆದರೆ ಕಾಲ ಕಟ್ಟಿತ್ತು ನಿನ್ನ ನನ್ನ ಸೆರಗಲೀ
ಅಂತೂ ಬೇಕೋ ಬೇಡವೋ ಮಾತಿನಿಂದ ಶುರುವಾದ ಈ ನಮ್ಮ ಸ್ನೇಹ!!
ಇಂದು "ನಾವಿಬ್ಬರೂ" ಎಂಬ ಪವಿತ್ರ ಬಂಧಕ್ಕೆ ತಲೆದೂಗಿದೆ
ಅಂದು ನೀನ್ಯಾರು ಎನ್ನುತ್ತಿದ್ದ ಮನಸು
ಇಂದು ನಾ ನಿನ್ನ ಜೊತೆಯಾಗಿ ಎನ್ನುತಿದೆ
ಕ್ಷಮಿಸು ತಪ್ಪಾಗಿದ್ದರೆ ಪ್ರೀತಿಸು ವ್ಯಕ್ತಿತ್ವ ಇಷ್ಟವಾದರೆ!
ಮೌನಿಯಾಗಿರುವೆ ನಿನ್ನಿಲ್ಲದೇ
ದೀರ್ಘವಾಗಿ ಯೋಚಿಸಿದರು
ಉತ್ತರ ದೊರೆತಿಲ್ಲಾ
ನಿನ್ನ ನನ್ನ ನಡುವಿನ ಸ್ನೆಹಕ್ಕೆ
ಹೊಸ ಕಳೆ ಸಿಗುತ್ತಿಲ್ಲಾ
ಎಂದೋ ಮಿನುಗಿದ ನಕ್ಷತ್ರದಂತೆ
ಒಮ್ಮೆ ನಕ್ಕಿ ನೀ ಮಾಯವಾದೆ
ಬಾಡಿದ ಹೂವಂತೆ ನಿನ್ನ ನೆನೆದು ನಾ ಸೋತೆ
ನೀರವ ರಾತ್ರಿಯ ಗಾಢಾಂಧಕಾರದಲ್ಲೂ
ಮಿನಗೋ ಮಿಣಕು ಹುಳುಗು ಗೋತ್ತು
ನಾ ಹುಡುಕುತ್ತಿರುವುದು ಯಾರೆಂದು
ಬೆಳೆಂದಿಗಳೇ ಬಾರದ ಈ ಊರಲ್ಲಿ ಒಬ್ಬನೇ
ಅಲೆಯುತ್ತಿರುವೆ ನಿನ್ನ ಹುಡುಕಾಟದಲ್ಲಿ
ಎಲ್ಲೂ ನಿನ್ನ ಸುಳಿವಿಲ್ಲಾ.....
ಎಮ್.ಎಸ್.ಭೋವಿ....✍️
ಜೀವನದಲ್ಲಿ
ಕೈ ಕಾಲು ಹಿಡಿದು
ಹೆಜ್ಜೆ ಹೆಜ್ಜೆಗೂ
ಎಷ್ಟೇ ಜನರು
ಎಷ್ಟೇ ಬೀಳಿಸಿದರು
ಎಷ್ಟೇ ಹಿಯಳಿಸಿದರು
ಎಷ್ಟೇ ದಾರಿ ತಪ್ಪಿಸಿದರು
ಎದೆ ಕುಗ್ಗದೆ ಜಗ್ಗದೆ ಬಗ್ಗದೆ
ಎದ್ದು ನಿಲ್ಲಬೇಕು
ನೀ ಸ್ವಾಭಿಮಾನದಿ
ನಿನ್ನ ಕಾಲು ಎಳೆದವರ
ಕಣ್ಣ್ ಅಂಚಲ್ಲಿ
ನೀ ಕಣ್ಣೀರು ಒರೆಸುವವರೆಗೆ