ಮತ್ತೆ ಮರಳಿ ಬಾ ಗೆಳತಿ...
ಇಂದು ಎನದಿರಲಿ ಕ್ಷಮೆ ಕೇಳುವ ಸರತಿ.....
ಆಳವಾಗಿ ಕಾಡುತಿದೆ ಇಂದೇಕೋ ನಿನ್ನ ನೆನಪು..
ಜೊತೆಯಲ್ಲಿಯೇ ಆ ನಿನ್ನ ಕೆನ್ನೆಯ ಹೊಳಪು..
ಒಮ್ಮೆ ನಗುವೆಯಾ ನೀ ಎನ್ನ ಗೆಳತಿ..
ತೋರಲಿ ಆ ನಿನ್ನ ಗೂಳಿಯ ಕೆನ್ನೆ ರೀತಿ ನೀತಿ..
ಇಂದು ಚಂದ್ರನಿಲ್ಲ ಆಗಸದಲ್ಲಿ ಖಾಲಿ ಖಾಲಿ
ಆಗಸಕೆ ಚಂದ್ರನಂತೆ ನನ್ನೊಂದಿಗೆ ನೀ ಇಲ್ಲದಂತೆ.
.
ಇನ್ನೂ ಮುನಿಸೇಕೆ ಮುತ್ತಿನೊಡತಿ..
ಬೇಗ ಬಾ.. ಇನ್ನೊಮ್ಮೆ ಕೂಡಿ ನುಡಿಸುವ ಆ ಮಧುರ ತಂತಿ ...
ಮತ್ತೆ ಮರಳಿ ಬಾ ಗೆಳತಿ..
ಇಂದು ನನದಿರಲಿ ಕ್ಷಮೆ ಕೇಳುವ ಸರತಿ.....
"ಕಿಚ್ಚ ಶಶಿ"
ಜೀವನದಲ್ಲಿ ನಾವು ನಮಗೆ
ನಾವು ಕೆಟ್ಟವರು ಆದ್ರು
ಬೇರೆಯವರಿಗೆ ಬಣ್ಣ ಬಣ್ಣದ ತರ
ಇದ್ದಾರೆನೇ ಜನ ನಮ್ಮ ಮೆಚ್ಚುವುದು
ಆದರೆ ಯಾರೇ ಮೆಚ್ಚಲಿ ಮೆಚ್ಚದೆ ಇರಲಿ
ಹಾಗೆಯೇ ಬೇರೆಯವರ ಪಾಲಿಗೆ
ಮುಳ್ಳಾಗದೆ ಕೆಟ್ಟವನು ಆದರು
ನಮಗೆ ನಾವು ನಮ್ಮ ಮನಸಿಗೆ
ಒಳ್ಳೆಯವನು ಆದರೆ ಸಾಕು ಏನಂತೀರಾ
ನಾನು ದಿನವೆಲ್ಲಾ ಕುಳಿತು
ಕೂಡಿದೆ, ಕಳೆದೆ, ಗಣಿಸಿದೆ, ಬಾಗಿಸಿದೆ
ನಿನ್ನ ಲೆಕ್ಕಾಚಾರದ ಮುಂದೆ
ನನ್ನ ಲೆಕ್ಕಚಾರ ಏನೇನು ಅಲ್ಲ ....
ಅವನ ಲೆಕ್ಕಚಾರದ ಮುಂದೆ
ನಮ್ಮ ಲೆಕ್ಕಾಚಾರ ಏನೇನು ನಡೆಯುವುದಿಲ್ಲ...
ಮುಸ್ಸಂಜೆಯ ತಂಪಲ್ಲಿ
ಆಕಾಶ ಸೂರ್ಯ ಒಂದಾದಂತೆ ಇಲ್ಲಿ,
ಸಾಗರದ ದಡದಲ್ಲಿ ಕುತಿರುವೆ ನಾನು.
ನೆನೆಯುತ್ತ ನಿನ್ನನ್ನು ನನ್ನ ಮನದಲ್ಲಿ.
ಸಮುದ್ರದ ಅಲೆಗಳು ಬರಲು,
ಮೆಲ್ಲನೆ ತಂಗಾಳಿ ಬೀಸಲು,
ಪುಟ್ಟ ಪುಟ್ಟ ಮೀನುಗಳು ನೀರಲ್ಲಿ ಇರಲು,
ಬಂದಂತ್ತಿದೆ ನನ್ನ ಸ್ಪರ್ಶಿಸಲು.
ಮರಳಲ್ಲಿ ಸಿಗುತ್ತಿದೆ ಚಿಕ್ಕ ಚಿಕ್ಕ ಶಂಖಗಳು,
ದೂರದ ತುಧಿಯಲ್ಲಿ ಕಾಣುತ್ತಿದೆ ಒಂದೆರಡು ತೆಂಗಿನ ಮರಗಳು,
ಹೆಜ್ಜೆ ಹೆಜ್ಜೆಗೂ ಮತ್ತೆ ಹಿಂತಿರುಗಿ,
ನಾನೂ ನೋಡಲು
ಹಿಂಬಾಲಿಸಿದಂತೆಯೇ ಇದೆ ನನ್ನಾ ಈ ಘಳಿಗೆಗೆ, ಸೂರ್ಯ ಮುಳುಗಲು.
ಭಾರತಾಂಬೆಯ ಸುತನಾಗಿ ಜನಿಸಿದ ನೀವು,
ರಕ್ತ ಸಿಕ್ತದ ಮಣ್ಣ ಪೂಜಿಸಿ ಕ್ರಾಂತಿಯ ಕಿಡಿಯಾಗಿ
ಯುವಕರ ಹೃದಯದೊಳಗೆ ಬೆಳಗುತ್ತಿರುವ ಭಾಗ್ಯವಂತರೆ ನೀವು ನಮಗೆ.
ಅಂದರ ಭವಿಷ್ಯದ ಉದ್ದೀಪನಕ್ಕೆ ಹಗಲಿರುಳು
ಶ್ರಮಿಸಿದ ಲೂಯಿಸ್ ಬ್ರೈಲರಂತೆ ದಿವ್ಯ ಚೇತನರಾಗಬೇಕು ನೀವು ನಮ್ಮ ಪಾಲಿಗೆ.
ನೊಂದವರ ಕಷ್ಟಗಳ ಕಂಡು
ನಿಸ್ವಾರ್ಥ ಸೇವೆಗೆ ಸಿದ್ಧರಿರುವಿರಿ ಸದಾ ನೀವು
ತಥಾಗತರ ಶಿಷ್ಯರಂತೆ.
ಸಮಾಜದ ದುಸ್ಥಿತಿಗೆ ನಿವೇದಿಸೋ,
ಮನಸಿರುವ ನಿಮ್ಮ ವ್ಯಕ್ತಿತ್ವ,
ಸತ್ ಕಾರ್ಯವೆಸಗುವ ನರೇಂದ್ರರ ಕುಡಿಯಾದ ನಿಮಗೆ,
ಸಾಕ್ಷಿಯಾಗಲಿದೆ ಶರಧಿಯ ಪರದೆಗಳು ಮುತ್ತಿಟ್ಟು ನಿಮ್ಮ
ಪಾದ ತೊಳೆಯುವ ಅನುಕ್ಷಣದ ಮಹೋತ್ಸವಕ್ಕೆ.
ನನ್ನೊಳಗೆ ಮೂಡುವ ವೀರರ ಚಿತ್ರವ,
ನಿಮ್ಮೊಳಗೆ ಕಂಡಿರುವೆ ಅವರ ಸಿಂಹ ಸ್ವಪ್ನ ದಂತಹ ಪ್ರತಾಪವ.
ಸಾವಿನ ಖಚಿತತೆಯ ಅರಿತ ನೀವು,
ಇತಿಹಾಸದ ಪುಟದೊಳಗೆ ಸ್ಪಟಿಕದಂತೆ ಹೊಳೆಯಬೇಕೆಂಬ ಹೆಬ್ಬಯಕೆ ನನಗೆ.
ನಿಮ್ಮ ಅಮರತ್ವ ಕಾಯಕದ ಪತದೊಳಗೆ,
ಅವಕಾಶವ್ವಿತ್ತರೆ ನೀವು,
ನಶ್ವರದ ಆಶಯಗಳ ತೊರೆದು ನನ್ನ ಅಳಿಲು ಸೇವೆಯನರ್ಪಿಸುವೆ ನಿಮ್ಮ ಕೃತಿಗೆ.
ಸರ್ವ ಧರ್ಮ ಸಮನ್ವಯದ ಜಾಗೃತಿ ದೀಪ, ಗಡಿಯಾಚೆ
ಬೆಳಗುತಿರಲಿ ಕನ್ನಡ ಧೀರರ ಪ್ರತಾಪ.
ಯಾತ್ರಿಕರನ್ನು ಆಕರ್ಷಿಸುವ ಮಲೆನಾಡ ಪ್ರಕೃತಿ,
ನಡೆನುಡಿಯಲ್ಲಿ ಮೆರೆಯುತ್ತಿದೆ ನಮ್ಮ ನಾಡ ಸಂಸ್ಕೃತಿ.
ಸಾಧುಸಂತರ ಪಾಠ ಮೌಢ್ಯವಳಿಸಿ ಮೂಡಿಸಿದೆ ನಮ್ಮೊಳಗೆ ವಿಶ್ವಪ್ರೇಮದ ಭ್ರಾತೃತ್ವ,
ವಚನಾಮೃತ ಭಕ್ತಿ ಸಾರ ಮಕ್ಕಳ ಮೊಳಗಿಸಿದೆ ಮಾತೆಯ ರಕ್ಷಣೆಗೆ.
ಜನಮನಗಳು ನೆನಪಿಡುವ ಸಾಧಕರ ಸಾಧನೆಯ ಸಾಲುಗಳ ಹೆಸರು,
ಒಂದಾಗಿ ಶ್ರಮಿಸಲು ತಿಳಿಸಿವೆ ನಮ್ಮ ನಾಡ ಪ್ರಗತಿ ಕೀರ್ತಿಗೆ.