Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಧುರ ಮೌನವೇ

ಮೌನಕೆ ಸೆರೆಯಾದ
ಮಧುರ ಮಾತುಗಳ
ಅರ್ಥ ನಿನಗೆ ಹೇಳಲಿ
ನಾ ಹೇಗೆ..??
ಎದೆಯಾಳದ
ಬಡಿತದ ಆ ಸುಂದರ
ಭಾವನೆಗಳ ನಿನಗೆ ತಿಳಿಸಲಿ
ನಾ ಹೇಗೆ..??
ಕಣ್ಣುಗಳು ಕಟ್ಟಿದ
ಆ ಕನಸುಗಳ
ಕೋಟೆಯಲಿ
ನಿನ್ನನು ನಿನಗೆ ತೋರಿಸಲಿ
ನಾ ಹೇಗೆ..??
ಮನಸಿನ ನೋವನ್ನು
ನಿನ್ನ ನೆನಪಲ್ಲಿ
ಮರೆಯುತ
ನಗುತ ಮುಂದೆ ಸಾಗಲಿ
ನಾ ಹೇಗೆ..??

- mallikarjun sonnad

27 Apr 2022, 10:53 pm

ಬದುಕು ಸುಂದರ

ಬದುಕು ಸುಂದರ ಉದ್ಯಾನವನದ ಹಾಗೆ. ಇಲ್ಲಿ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಮುಂತಾದ ಗಿಡಗಳಿವೆ. ಅದನ್ನು ನಾವು ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳು ವಿಶಾಲವಾಗಿರಬೇಕು. ಹಣವಿದ್ದರೆ ಫ‌ಲವಿಲ್ಲ, ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನು ಪ್ರೀತಿ ಎಂಬ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಹಣದೊಂದಿಗೆ ಅಂಟಿಕೊಂಡಿರುವ ದುರಂಹಕಾರ ನಮ್ಮನ್ನು ತಾಕದಂತೆ ಓಡಿಸಬೇಕು.


- mallikarjun sonnad

27 Apr 2022, 10:21 pm

ಚೆಲುವೇ ನಿನ್ನ ಮಡಿ

ಜಾಜಿ ಮಲ್ಲಿಗೆಗೆಚೆಲುವೆಯ ಮುಡಿ ಸೇರುವಾಸೆ
ಕೆಂಪು ಗುಲಾಬಿಗೆ ಪ್ರೇಯಸಿಯ ಕೈಸೇರುವ ಆಸೆ
ನವಿಲಿಗೆ ಮುಸಂಜೆಯ ತಂಗಾಳಿಯಲ್ಲಿ,
ಕೋಗಿಲೆ ರಾಗಕ್ಕೆ ಗರಿ ಬಿಚ್ಚಿ ನರ್ತಿಸುವ ಆಸೆ


ಚೋರನಿಗೆ ಇತರರ ಧನ ಧಾನ್ಯದ ಆಸೆ
ಅಧಿಕಾರಿ ಗೇ ದರಿದ್ರ ಲಂಚದ ಆಸೆ
ರಾಜಕಾರಣಿಗೆ ಅದಿಕಾರದ ಜೊತೆಗೆ ಗಂಟ್ಟಿನ ಆಸೆ
ಹಸಿದ ಹೊಟ್ಟೆಗೆ ತುತ್ತು ಅನ್ನದ ಆಸೆ
ಈ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದು ಒಂದು ಆಸೆ
ಅದರೆ ಆ ಆಸೆಗೆ ಆಸೆ ಈ ನಿರಾಸೆ..
ಹುಟ್ಟಿನ ಜೊತೆಗೆ ಸಿಗುವುದು ಒಂದೇ ಈ ಆಸೆ ಜೊತೆಗೆ ನಿರಾಸೆ...

- mallikarjun sonnad

27 Apr 2022, 10:20 pm

ಅರಿತು ನಡೆ ಸತ್ಯದ ಕಡೆಗೆ

ಸತ್ಯದ ಅರಿವು ನಗು ನಗುತ ನಡೆದುಬಿಡು ನೀನೊಮ್ಮೆ,
ಭೂಮಿಯೆಲ್ಲವ ಸುತ್ತಿಬಿಡು ಇಂದೊಮ್ಮೆ..!

ಇದ್ದಲ್ಲೇ ಇದ್ದು ಸಾಧಿಸುವುದಾದರೂ ಏನು?
ಬಾರನೆಂಬುವ ಹಠವ ಮೆಟ್ಟಿಬಿಡು,

ಅಲೆದುಬಿಡು ನೀನೊಮ್ಮೆ ಅಲೆಮಾರಿಯಂತೆ,
ಅರ್ಥವಾಗುವುದು ಜೀವನದ ಸತ್ಯಾ,
ಅಲೆದ ದಾರಿಯಲಿ ಹರಿದ ಚಪ್ಪಲಿಯಂತೆ...!

ಎಲ್ಲವೂ ಬೇಡದಾದಾಗ,
ಹೊರಟುಬಿಡು ನೀನೊಮ್ಮೆ,
ಪರಿಸರದ ಮಡಿಲಲ್ಲಿ ಮಲಗಿಬಿಡು ನೀನೊಮ್ಮೆ..!!

- mallikarjun sonnad

27 Apr 2022, 10:17 pm

ಭಾವನೆಗಳೇ...ಹೀಗೆ

#ಅಂತರಂಗ
ಹುಟ್ಟುತ್ತವೆ,
ಸಾಯುತ್ತವೆ
ಭಾವನೆಗಳಂತೆ
ಭಾವನೆಗಳು
ಅರಳುತ್ತವೆ
ಕಮರುತ್ತವೆ
ಆಸೆಗಳಂತೆ
ಆಗೊಮ್ಮೊಮ್ಮೆ
ಗಪ್ಪನೆಯ
ಏಕಾಂತ
ನೀರವತೆ
ಆವರಿಸಿದಾಗ
ಮುಸುಕಿನೊಳಗಿನ
ಸೆಖೆಗೆ ಬೇಸತ್ತು
ಮೆತ್ತನೆಯ
ಮಡಿಲನರಸಿ
ನಿನ್ನತ್ತ ನೋಡುತ್ತೇನೆ,
ಕಣ್ಣರಳಿಸುತ್ತೇನೆ,
ಯಾಚಿಸುತ್ತೇನೆ ಗೆಳೆಯಾ

ಏಕೆ ಇಲ್ಲದ ಚಿಂತೆ
ಕೊನೆ ಮುಟ್ಟದ ರಗಳೆ?
ಅನಿಸಿ,
ತೆರೆ ಸರಿಸಲೆಣೆಸುತ್ತೇನೆ
ನಿನಗರ್ಥವಾಗದ
ನನ್ನತನವ
ತೊರೆಯಲೆತ್ನಿಸುತ್ತೇನೆ
ಭೂತದ ಛಾಯೆಯಡಿ,
ಭವಿತದ ಮಾಯೆಯ
ಹೊದರನೆಲ್ಲಾ ಮುದುರಿ,
ನಿನ್ನ
ವರ್ತಮಾನದ ಜತೆಗೆ
ನಡೆಯಲೆತ್ನಿಸುತ್ತೇನೆ
ಆಗ ನೀ
ವಿಚಿತ್ರವಾಗಿ ನೋಡುವೆ
ನಾ ಬೇಸರದಲಿ ನುಡಿವೆ
ಇದೆಲ್ಲ ನಿನಗರ್ಥವಾಗುವುದೇ ಇಲ್ಲಾ

- mallikarjun sonnad

27 Apr 2022, 10:16 pm

ಮನದ ಭಾವ

ಮನದ ತುಂಬಾ
ಆವರಿಸಿದೆ
ಕಾರ್ಮೋಡ
ಎದೆಯೊಳಗೆ
ಹೇಳಲಾಗದ
ದುಗುಡ ಇಬ್ಬನಿ
ಕಳೆದ ಎಳೆಯ
ಚಿಗುರಿನಲಿ
ಹೊಸ ರಾಗ
ಮಿಡಿದ ಸುಳಿವಲಿ
ಮರೆತು ಹೋದ
ಮಾತೊಂದು
ಮಂಜಾಗಿ ಇಳಿದಿದೆ
ಗರಿಕೆಯಂಚಲಿ
ಹಿತವಾಗಿ ಬೀಸುತ್ತಿರುವ
ಗಾಳಿಯಲಿ
ಕಲಕುತ್ತಿದೆ ಏಕಾಂತವು
ಮೌನದ ಮರೆಯಲಿ
ಹೆಪ್ಪುಗಟ್ಟಿದ
ಬೇಸರವ ಕಂಡು
ಕರೆ ಕೊಟ್ಟಿದೆ
ತುಂತುರು ಹನಿ
ನೇಸರನ ಜೊತೆ ಸೇರಿ
ನಲಿವಿನಲಿ

- mallikarjun sonnad

26 Apr 2022, 09:36 pm

ಚಿಂತೆಯಿಲ್ಲದ ಚಿತೆ

ಚಿಂತೆ ಇಲ್ಲದೇ
ಜೀವನ ಸಾಗದು
ಚಿತೆ ಏರದ ಮನುಷ್ಯರಿಲ್ಲ
ಚಿಂತೆಯಿರದೆ
ಮನುಷ್ಯನೆಂದೆನಿಸಿ
ಕೊಳ್ಳುವುದಿಲ್ಲ.
ಚಿಂತೆನರನಿಗಿಲ್ಲದೆ
ಮರಕ್ಕೆ
ಬಾಧಿಸುವುದೇ?.
ಚಿಂತೆ ಚಿತೆ ಏರಿಸುವ
ಚಿತ್ತ ಚಂಚಲ
ಗೊಳ್ಳಬಾರದು.
ಮಳೆಯಾಗಿ ಸುರಿದು
ಕಡಲಾಗಿ ಹರಿದು
ಹಗುರಾಗುವ
ಮೋಡದಂತೆ
ನೂರು ಸಾವಿರ ಚಿಂತೆಗಳ
ಗಾಳಿಯಲಿ ತೂರಿ
ಗಾಳಿಗಿಂತಲೂ
ಹಗುರವಾಗಿ
ಬಾಳಬೇಕು.

- mallikarjun sonnad

26 Apr 2022, 09:30 pm

ಯಾವುದು ಅವಶ್ಯಕತೆ ಇರುವುದಿಲ್ಲ.

ಜಗದ ನಿಯಮ
ಯಾವುದು ಇಲ್ಲಿ
ಇರುವುದಿಲ್ಲ
ನಿಯಮ ಮೀರಿ
ಎಲ್ಲರೂ
ಇರುವವರು
ಇಲ್ಲಿ ಎಲ್ಲವನ್ನು
ತಿಳಿದುಕೊಳ್ಳುವ
ಅವಶ್ಯಕತೆ ಇಲ್ಲ
ಎಲ್ಲರಿಗೂ
ಎಲ್ಲದಕ್ಕೂ
ಪ್ರತಿಕ್ರಿಯಿಸುವ
ಅವಶ್ಯಕತೆ ಇಲ್ಲ
ಎಲ್ಲರನ್ನು
ಮೆಚ್ಚಿಸುವ
ಅವಶ್ಯಕತೆ ಇಲ್ಲ
ಎಲ್ಲರನ್ನು
ಅರ್ಥಮಾಡಿಕೊಳ್ಳುವ
ಅವಶ್ಯಕತೆ ಇಲ್ಲ
ಎಲ್ಲರಿಗಾಗಿಯೂ
ಕಾಯುವ
ಅವಶ್ಯಕತೆ ಇಲ್ಲ

- mallikarjun sonnad

26 Apr 2022, 09:15 pm

ಹಕ್ಕಿಗಳೇ ನೀವು ಮಾತನಾಡುವ... ಮುನ್ನ

ಎಲ್ಲಾ ಪಕ್ಷಿಗಳು
ಮಾತನಾಡುವಂತಿದ್ದರೆ ,
ಜಗತ್ತಿಗೆ.. ಸಾರಿ...ಸಾರಿ...
ಹೇಳುತ್ತಿದ್ದವು
ಹೇ.. ಸ್ವಾರ್ಥಿ ಮನುಜ...
ಸೃಷ್ಟಿಯಲ್ಲಿ ಇರುವುದೆಲ್ಲಾ
ನಿನಗಾಗಿ ಮಾತ್ರವಲ್ಲ
ನಮಗೂ ಬದುಕುವ
ಹಕ್ಕಿದೆ ಬದುಕಲು ಬಿಡಿ,
ದಯವಿಟ್ಟು ಕಾಡನ್ನು
ನಾಶ ಮಾಡಬೇಡಿ,
ಪ್ರಕೃತಿಗೆ ವಿಷ ಉಣ್ಣಿಸಬೇಡಿ,
ನೀರನ್ನು ಕಲುಷಿತ ಗೊಳಿಸಬೇಡಿ,
ನಿಮಗಾದರೆ ಮನೆ ಮಠವಿದೆ..
ನಾವೆಲ್ಲಿಗೆ ಹೋಗುವುದು..?
ನಿಮಗಾದರೆ ಜೀವನಕ್ಕೆ ಬೇಕಾದ
ಎಲ್ಲಾ ವ್ಯೆಭೋಗಗಳಿವೆ
ನಾವೆಲ್ಲಿಗೆ ಹೋಗುವುದು..??
ನಮಗೂ ಜೀವವಿದೆ..
ನೋವಿದೆ..
ಹಸಿವಿದೆ..ಆಸೆಗಳಿವೆ..
ಕನಸುಗಳಿವೆ
ದೇವರು ನಮಗೆ ಕೊಟ್ಟಿರುವುದನ್ನು
ದಯವಿಟ್ಟು ಕಿತ್ತುಕೊಳ್ಳಬೇಡಿ..!!
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

26 Apr 2022, 05:16 pm

ಸ್ವಾಭಿಮಾನ

ಸಿಂಪತಿಗಾಗಿ ಬದುಕುವ ಮನುಷ್ಯ ನಾನಲ್ಲ
ಬದುಕಿಗಾಗಿ ಬುದುಕುವ ಮನುಷ್ಯ ನಾ
ಶ್ರೀಮಂತಿಕೆಗಾಗಿ ದುಡಿಯುವ ಮನುಷ್ಯ ನಾನಲ್ಲ
ಜೀವನಕ್ಕಾಗಿ ದುಡಿಯುವ ಮನುಷ್ಯ ನಾ
ಆಸೆಯಿದೆ ಅತಿಯಾಸೆ ಪಡುವ ಮನುಷ್ಯ ನಾನಲ್ಲ
ಹಾಸಿಗೆ ಇದ್ದಷ್ಟು ಕಾಲ್ ಚಾಚುವ ಮನುಷ್ಯ ನಾ
ನೀರಾಭಿಮಾನಕ್ಕೆ ತಲೆ ಬಾಗುವ ಮನುಷ್ಯ ನಾನಲ್ಲ
ಸ್ವಾಭಿಮಾನಕ್ಕೆ ತಲೆಬಾಗುವ ಮನುಷ್ಯ ನಾ

- ರಾಜು ಹಾಸನ

26 Apr 2022, 12:35 am