Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಲೆಯೇ ಇರದೆ

ಅಲೆಯೇ ಇರದ ಸಾಗರದ ತೀರ
ಇ ಎದೆಯೊಳಗೆ ನೋವು ಸಾವಿರ ಸಾವಿರ
ಕೋಗಿಲೆಯೇ ಬರದೇ ಒಣಗುತಿದೆ ಮಾಮರ
ಕಾಣದ ಭಾವನೆಯೊಳಗಣ ವೇದನೆ ನಿರಂತರ
ನಿನ್ನ ನೆನಪು ನೆನೆದು ಕರಗುತಿದೆ ಚಂದಿರ
ಕನಸೇ ಕಾಣದ ಕಣ್ಣೊಳಗೆ ನಿರಾಶೆಯ ಆಗರ
ಮೂರು ಪದಗಳ ನುಡಿದು ಹೋದೆಯಾ ದೂರ
ನೆನಪನ್ನು ಕೊಟ್ಟು ಹೊರಟು ಹೊದೆಯಲ್ಲ ಬಲುದೂರ......

ಪ್ರೀತಿಯ ಹೃದಯ...........

- Swati S

03 Nov 2022, 05:25 pm

ಮೌನ

ಕೊಲ್ಲಬೇಡ ಮೌನದಿಂದ
ಹೇಳಿಬಿಡು ಒಂದು ಸಾರಿ
ತಪ್ಪಿದರೆ ತಿದ್ದಿಕೊಳ್ಳುವೆ
ಮೌನದಿಂದ ಮೌನ
ಕೊಲ್ಲಬೇಡ ಮೌನ
ಮೌನವೇ ಉತ್ತರವೇ
ಮನಸ್ಸ ಶಾಂತಿಗ ಮೌನ
ಶಾಂತಿ ಶಾಂತಿಗೂ ಮೌನ
ಸಿಟ್ಟಿಗೂ ಮೌನ
ಕಲಹಕ್ಕೂ ಮೌನ
ತಪ್ಪಿಗೂ ಮೌನ
ಸರಿ ಇದ್ದರು ಮೌನ
ಹೇಳಿಬಿಡು ಒಂದು ಸಾರಿ
ಎಲ್ಲದಕ್ಕು ಮೌನ
ಉತ್ತರ ನೀಡಬಾರದೆ ಮೌನ
ತಪ್ಪಿದರೆ ಕ್ಷಮೇ
ಮಾತಾಡು ಮೌನ
ದಿಕ್ಕು ಗೋಚರಿಸದೆ ಮೌನ
ಮೌನ ಮೌನ ಮೌನ
ಕೊಲ್ಲಬೇಡ ಮೌನ........
ಸ್ವಾತಿ S.........

- Swati S

03 Nov 2022, 05:08 pm

ಅವಳಿಗು ತಿಳಿದ ವಿಷಯ...

"ಸದ್ದೇ ಇಲ್ಲದೆ.. ಹೃದಯ ಒಡೆದಳು !
ಹೇಳದೆ_ಕೇಳದೆ.. ದೂರಕೆ ನಡೆದಳು !
ಮಾಡಿದ ಆಣೆಗಳ ಮರೆಮಾಚುತ...
ಏನನ್ನೋ ಗೆದ್ದಂತೆ ಇದ್ದಳು !
ಭಾವನೆಯ ಬೂದಿಗೆ ತಿರುಗಿಸಿ...
ನನ್ನ ಮಾತ ಆಲಿಸದೆ ಹೋದಳು !
ಸುಳ್ಳಾಗದಲ್ಲ ಹೋದರೂನು...
ನಡೆದಂತ ವಿಷಯ !
ಸುಳ್ಳಲ್ಲ ಒಲವಾಗಿದ್ದು ಅನ್ನೋದು...
ಅವಳಿಗು ತಿಳಿದ ವಿಷಯ !!"
ಎಮ್.ಎಸ್.ಭೋವಿ...✍️

- mani_s_bhovi

02 Nov 2022, 10:51 pm

ಕರುನಾಡು

ಕರುಣೇ ತುಂಬಿದ ಗುಡಿ ಈ ನಾಡು
ಗಂಧದ ಗುಡಿ ಈ ನನ್ನ ಬಿಡು
ಸಂಸ್ಕೃತಿ ನೆಲೆಯ ತವರೂರು
ಸಾಹಿತ್ಯ ಕ್ಷೇತ್ರಕ್ಕೆ ನಮಗೆ ಸಮಾನಾರು

ಕರುನಾಡೆ ಬಹಳ ಅಪರೂಪ
ಇಲ್ಲಿ ತೋರಸತ್ತಾರೆ ಎಲ್ಲರು ಅನುಕಂಪ
ನಮ್ದು ಯಾರ ಜೊತೆಯಲ್ಲಿ ಇಲ್ಲ ಮನಸ್ತಾಪ
ಕಾರಣ ನಮ್ಮ ಗುಣ ಬಹಳ ಅಪರೂಪ

ಎಂಟು ಪೀಠ ಜ್ಞಾನಕ್ಕೆ
ಮೂರು ರತ್ನ ಭಾರತಕ್ಕೆ ಕೊಟ್ಟ
ರಾಜ್ಯ ನನ್ನದು ಅದುವೇ ನನ್ನ ಕರುನಾಡು
ಸಾರ್ಥಕತೆಯ ನೆಲೆಯು ನನ್ನ ಬಿಡು.....

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....

- Swati S

31 Oct 2022, 07:46 pm

ಬಾನಿನಲ್ಲಿ ಮೂಡಿದ ಚಂದಿರ

ಬಾನಿನಲ್ಲಿ ಮೂಡಿದ ಚಂದಿರ
ನೋಡಲು ತುಂಬಾ ಸುಂದರ
ಆಗ ಆಕಾಶ ಒಂದು ದೊಡ್ಡ ಚಪ್ಪರ
ನಕ್ಷತ್ರಗಳು ಕಾಣುವವು ಒಂದಲ್ಲ ನೂರಾರು ಸಾವಿರ
ಆದರೆ ಇದು ಇರುವುದಿಲ್ಲ ನಿರಂತರ
ಇದು ದಿನನಿತ್ಯದ ಸಂಚಾರ
ನಮಗ ಯಾಕೆ ಬೇಸರ.......

- Swati S

30 Oct 2022, 07:08 pm

ಕನ್ನಡ ಕವನ

ಪ್ರೀತ್ಸೋರು ಹೇಗಿರಬೇಕು ಅಂದ್ರೆ ..?
ಇದ್ರೆ ಕನ್ನಡಿ ಥರ ಇರ್ಬೇಕು ..
ಇಲ್ಲಾಂದ್ರೆ ನೆರಳಿನ ಥರ ಇರ್ಬೇಕು ..
ಯಾಕೆಂದ್ರೆ ..?
ಕನ್ನಡಿ ಯಾವತ್ತು ಸುಳ್ಳು ಹೇಳೊಲ್ಲ ..
ನೆರಳು ಯಾವತ್ತೂ ನಮ್ಮನ್ನ ಬಿಟ್ಟು ಹೋಗೋಲ್ಲ..
ನಮ್ಮ ಜೊತೆನೇ ಇರುತ್ತೆ
ಹಾಗೆ ಪ್ರೀತ್ಸೋರು ಇದ್ರೆ ಎಷ್ಟು ಚೆಂದ ಅಲ್ವ ..!!
ಶುಭ ದಿನ

- yallaling haralayya

30 Oct 2022, 06:53 pm

ಗೆಳೆತನ

ಪ್ರತಿ ಜೀವದಲ್ಲೂ ಮರೆಯಲಾಗದ ಸಂಬಂಧ;
ಇದು
ಹಲವು ಜೀವಕ್ಕೆ ಜೀವವೇ ಇದು;
ಇನ್ನು ಕೆಲ ಜೀವಗಳಿಗೆ ಸಂತೋಷ
ಮರೆಸಿದ್ದು ಇದು;
ಹಲವು ಕೆಲವು ಜೋಡಿ ಕೊನೆಗೆ
ಉಳಿವುದು ಇದೇ ......
ಏಕೆಂದರೆ...
ಪ್ರಪಂಚದ ಅತಿ ದೊಡ್ಡ ಶಕ್ತಿ
ಅಂದ್ರೆ ಇದೇ
ಅದರಲ್ಲಿ ನಾನು ಒಬ್ಬಳು
ನಾನು ಪಡೆದಿದ್ದು ಮಗು ಮನಸಿನ
ಮನುಜರು ಅವರೇ..
ಇವರೂ
ನನ್ನ ಗೆಳೆಯರು

- Laxmi Dabbanavar

29 Oct 2022, 07:36 pm

ಪುನೀತ್ ರಾಜಕುಮಾರ್

ಇದ್ದರೆ ಪುನೀತನಂತೆ ಇರಬೇಕು...
ನಡೆದರೆ ದೇವರು ಮೆಚ್ಚುವಂತೆ ನಡೆದುಕೊಳ್ಳಬೇಕು...

ದುಡ್ಡು ಇದೆ ಎಂದು ಅಹಂಕರವನ್ನು ತೋರಲಿಲ್ಲ...
ದೊಡ್ಡ ವ್ಯಕ್ತಿಯೆಂದು ಸೊಕ್ಕಿನಿಂದ ಮೆರೆಯಲಿಲ್ಲ...
ತನ್ನ ಮಾತಿನಿಂದ ಯಾರ ಮನಸ್ಸಿಗೂ ನೋಯಿಸಲಿಲ್ಲ...
ದೊಡ್ಡ ಹೆಸರಿದೆಯೆಂದು ತೋರಿಸಿಕೊಳ್ಳಲಿಲ್ಲ...
ಈ ನಮ್ಮ ಪುನೀತಾ...
ಇದ್ದದ್ದನ್ನು ಇದ್ದ ಹಾಗೆಯೇ ದಾನ ಮಾಡಿದ...
ಮತ್ತೊಬ್ಬರ ನೋವಿಗೆ ಸ್ಪಂದಿಸಿದ...
ಇನ್ನೊಬ್ಬರ ಜೀವನವು ಸುಖದಿಂದ ಇರಲಿ ಎಂದು ಹಾರೈಸಿದ...
ನಮ್ಮ ನೆಚ್ಚಿನ ಅದ್ಭುತವಾದ ವ್ಯಕ್ತಿ ಅಗಿ...
ದೇವರ ಸರಿಸಮವಾಗಿ ಹೊರಟೆ ಹೋದ...
ಈ ನಮ್ಮ ಪುನೀತಾ...

ಮತ್ತೆ ಹುಟ್ಟಿ ಬಾ ಎಂದು ಹೇಳುವ ಬದಲು...
ನೀನಂತೆ ಬದುಕುವೆವು...
ನೀನಂತೆ ನಡೆಯುವೆವು...
ನೀನಂತೆಯೇ ಇರುವೆವು...
ಮತ್ತೊಬ್ಬರ ಕಷ್ಟಕ್ಕೆ ನೆರವಾಗುವೆವು ಎಂದು ಮನ ಹೇಳಲು ಬಯಸುವುದು...

_Aksh_Akshita_

- Akshita Paragi

29 Oct 2022, 03:45 pm

ನಗುವಿನ ಸರದಾರ

ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ,
ಮನಗಳಲ್ಲಿ ನಂಬಿಕೆ ಭಾವ ಮೂಡಿಸಿ,
ನಮ್ಮೆಲ್ಲರ ಏಳಿಗೆಯತ್ತ ಕೈ ಮಾಡಿ ಕಳಿಸಿ,
ನೋವಲ್ಲಿದ್ದವರನ್ನ ನಗುಮುಖದಿಂದ
ಸಮಾಧಾನಿಸಿ,
ನಗು ಮುಖದ ರಾಜಕುಮಾರ ಯೇನಿಸಿ,
ಕೊನೆವರೆಗೂ ಶತ್ರುವಿಗೂ ಒಳ್ಳೆಯದೇ ಬಯಸಿ,
ತನ್ನ ಜೀವನ ಪ್ರಯಾಣ ಮುಗಿಸಿ,
ಈ ಕ್ಷಣ ಎಲ್ಲರಿಂದಲೂ ಅಳಿಸಿ,
ಮನುಕುಲದ ಮನಗಳಲ್ಲಿ ನೆಲೆಸಿ,
ನೆನಪಿಸಿಕೊಳ್ಳುತ್ತಾ ಒಂದು ವರ್ಷ ಸಾಗಿಸಿ,
ಹೋದ ಆ (ದೈವ) ಜೀವ ಮರಳಿ ಬರಲೆಂದು ಆ ದೇವರಲ್ಲಿ ನಮಿಸಿ,
*.... ಅಪ್ಪು.....*

- Laxmi Dabbanavar

29 Oct 2022, 09:24 am

ಬೆಳಕಿನ ಹಬ್ಬ


ನಾವು.....
ಕಷ್ಟ ಅನುಭವಿಸಿದ್ದೇವೆ ಈ ಹಿಂದೆ
ಅದೊಂದು ರೀತಿಯ ಹುಳಿ;
ಕಷ್ಟ ದಾಟಿ ಮುಂದೆ ಸಾಗಿ
ಸಮಾಧಾನದಿಂದ ತಾಳಿ;
ಎಲ್ಲರಿಗೂ ಸಂತೋಷ ಬಯಸಿ
ಅಂತೆಯೇ ಬಾಳಿ;

ಬೆಳಕಿಗೆ...
ನನ್ನಲ್ಲಿ ಅಡಗಿದ ನೀಚ
ಗುಣ ತುಳಿ;
ಮೋಸದ ಪ್ರಪಂಚಕ್ಕೆ ಬರಲಿ
ಬಿರುಗಾಳಿ;
ಮನುಷ್ಯರಿಂದ ಮನುಷ್ಯ ಹಾಗೇ,
ದೀಪದಿಂದ ದೀಪಕ್ಕೆ ಮಾನವನೇ ನಾಂದಿ
ಆಗುವ ಆವಳಿ;
ಇದೇ ಹರುಷದಿಂದ ಹೊತ್ತಿದ ಪಣತಿ
ಶಾಂತವಾಗದೀರಲಿ ;
ಭಾವ ತುಂಬಿ ಮನಸಾರೆ ಆಚರಿಸೋಣ
ಈ ಬೆಳಕಿನ ಹಬ್ಬ ದೀಪಾವಳಿಯ.....*

ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು

- Laxmi Dabbanavar

26 Oct 2022, 03:52 pm