Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೇವ....

ಬೆಂಕಿ ತಾಗಿಸಿಕೊಂಡು ದೀಪ ಕಿಚ್ಚಿಗೆ ಅಂಜಿದೆಂದೆಂತಯ್ಯ
ಅಂತಾದರೆ ಊರ ಬೆಳಗುವವರಾರು?
ಶಾಖಕೆ ಅಂಜಿ ಸೂರ್ಯ ಅತ್ತರೆ
ಲೋಕ ಬೆಳಗುವವರಾರು.?
ಚಳಿ ತಾಳದೆ ಶಶಿಯೆ ಕಂಬನಿ ಮಿಡಿದು ಬಿಟ್ಟರೆ
ತಾರೆಗಳಿಗೆ ಜೊತೆಗಾರರು ಯಾರು
ನನ್ನ ತಪ್ಪಾ ಕಂಡು ನನ್ನ ನೀನು ಕೈ ಬಿಟ್ಟರೆ
ನನ್ನ ಮನವ ಬೇಳಗುವವರರು ದೇವ?

✍️ ನಿಶಾ ಅಂಜುಮ್

- Nisha anjum

20 Nov 2022, 11:56 pm

ಕಲಿಯುಗ.....

ಬುದ್ಧಿವಂತಿಕೆ ಯಲ್ಲಿ ಶಶಿಯಲ್ಲಿ ಪಾದವಿತ್ತು
ಸಮುದ್ರ ರಾಜನ ಭೇದಿಸಿ ಪಳೆಯುಳಿಕೆ ಪಡೆದ
ವಾಯುವನ್ನು ಬಂಧಿಸಿ ಅಡುಗೆ ಮಾಡಿದ
ವರುಣನ ಕಲುಷಿತ ಮಾಡಿದ
ಆಧುನಿಕ ಮಾನವ ಮತ್ತೆ ಏಕೆ ಎನಿಸುವೆ ಆ ಸತ್ಯಾಯುಗದಕತೆಯನ್ನ
ಇದ್ದರೆ ನೀನು ಅಲ್ಲಿ ನಿರ್ಮಿಸುತ್ತಿದೆ
ಮತ್ತೊಂದು ಕಲಿಯುಗವ ನ್ನು ನನ್ನಾತ್ಮಾ ಲಿಂಗ

- Nisha anjum

20 Nov 2022, 11:54 pm

ಅಂತರಾಳದಲ್ಲಿ ಬರಿ ನಿನ್ನ_ಒಲವೇ...

"ನೀ_ಓದು ಒಮ್ಮೆ ಆದರೂ..
ನಾ_ಬರೆದಿರುವ ಒಲವಿನ ಪತ್ರವ !
ಅಂತರಾಳದಲ್ಲಿ ಇದ್ದ ಭಾವವೆಲ್ಲ..
ಹೆಕ್ಕಿ ತುಂಬಿರೋ ಸಾರವ !!"
"ಬರಿ ಪದಗಳೇ ಅಲಿಲ್ಲ..
ಆಲಿಸು ಮನದಿ ಒಲವ_ನಾದ !
ನೀ_ಅಷ್ಟೇ ಅಲಿಲ್ಲ..
ನಾ_ಕೂಡ ಇರುವೆ ಅಲ್ಲಿ ಸೀದಾ_ಸಾದ !
ಪೂರ್ಣ_ನೀನೆ..
ನನ್ನ ಆವರಿಸಿ ಕೊಂಡಿರುವೆ ಒಲವೇ !
ತಿಳಿಯೇ..
ಅಂತರಾಳದಲ್ಲಿ ಬರಿ ನಿನ್ನ_ಒಲವೇ !!"
ಎಮ್.ಎಸ್.ಭೋವಿ...✍️

- mani_s_bhovi

20 Nov 2022, 10:41 pm

ಶಿವ

ನೀನೊಂದು ಮಹಿಮೆ
ನಿನ್ನ ದಯೆ ನನ್ನ ಹಿರಿಮೆ
ಬಾಳು ನೀ ಕೊಟ್ಟ ಭಿಕ್ಷೆ
ನೀನೆ ನನಗೆ ರಕ್ಷೆ
ಕಾರ್ಯ ಕಾರಣಗಳು ಬೇಡ ನಿನ್ನ ನಂಬಲು
ನೀನೊಬ್ಬ ಸಾಕು ಈ ಜೀವನ ಸಂಪೂರ್ಣವಾಗಲು..


ಕಣ್ಣಂಚಲ್ಲಿ ನೀರು ತಂದವರು ಸಾವಿರ ಜನ
ಕಣ್ಣೊರೆಸಿದ ದೈವ ನೀನು ಮಾತ್ರ
ಧೈರ್ಯ ತುಂಬಿದ ಗುರುವು ನೀನು
ಬದುಕುವ ಛಲ ಹುಟ್ಟಿಸಿದ ತಂದೆ ನೀನು
ಆತ್ಮ ಸ್ಥೈರ್ಯವ ತುಂಬಿದವನು ನೀನು
ಆತ್ಮ ತೃಪ್ತಿಯಂತೆ ಬದುಕುತ್ತಿರುವವಳು ನಾನು..



ನನ್ನ ನೋವನ್ನು ಕಂಡು ಕಾಡದಂತೆ ನಡೆದವರೆ ಹೆಚ್ಚು
ಸ್ವಾರ್ಥ ಜನರ ಸಂತೆಯಲಿ ನನ್ನ ದೂರಿದವರು ಮತ್ತೊಂದಷ್ಟು
ಏನೇ ಆಗಲಿ ಸ್ವಾಭಿಮಾನವ ಬಿಡದ ಹೆಣ್ಣು ನಾನು
ನೀ ನನ್ನೊಂದಿಗಿರುವಾಗ ಮತ್ತಾರ ಹಂಗೇಕಿನ್ನು...

- Tanuja.K

20 Nov 2022, 08:03 am

ಸಮಯ

ಎಲ್ಲರಿಗೂ ಇರುವುದು ೨೪ ಗಂಟೆಯ ಸಮಯ
ಆದರೂ ಹೇಳುವರು ನನಗಿಲ್ಲ ಸಮಯ

ಅವರಿವರ ಬಗ್ಗೆ ಮಾತಾಡಿ ಕಳೆಯುವರು ಸಮಯ
ತನಗಾಗಿ ಯೋಚಿಸುವುದ ಮರೆಸಿತು ಸಮಯ

ಯೋಚನೆಯ ಮಾಡಲು ಇರುವುದು ಸಮಯ
ಯೋಜನೆ ಮಾಡಲು ಇಲ್ಲ ಸಮಯ

ಬಡವನಿಗೆ ಬಲ್ಲಿದನಿಗೆ ಇರುವುದು ಒಂದೇ ಸಮಯ
ಯಾರಿಗೂ ಕಾಯದೆ ಕಳೆಯುವುದು ಸಮಯ

ಎಲ್ಲರೂ ಬಳಸುವರು ಮಹತ್ವದ ಸಮಯ
ಆದರೆ ಎಲ್ಲರಿಗೂ ತಿಳಿಯಲಿಲ್ಲ ಆಸ್ತಿ ಎಂಬುದು ಸಮಯ

- Tanuja.K

20 Nov 2022, 01:07 am

ಗುರು - ಗುರಿಯ ಮಾಗ೯ದಶ೯ಕರು

ಗುರುವನ್ನು ನೆನೆಯೋಣ ಪ್ರೀತಿಯಿಂದ
ಅವರ ಸಾಧನೆಯನ್ನು ಸ್ಮರಿಸೋಣ ವಿನಯದಿಂದ
ಅವರ ಪ್ರವಚನ ಪಡೆಯೋಣ ಗೌರವದಿಂದ...



ವಿದ್ಯಾರ್ಥಿ ಬದುಕಿಗೆ ದಾರಿ ದೀಪವಾಗುವವರು ಗುರು
ವಿದ್ಯಾರ್ಥಿ ಸಾಧನೆಗೆ ಮೆಟ್ಟಿಲಾಗುವವರು ಗುರು
ನಮ್ಮ ಮಾರ್ಗದರ್ಶಕರು ನಮ್ಮ ಗುರು..



ಗುರಿ ಇರುವುದು ಮುಂದೆ
ಸರಿಯಾದ ದಾರಿ ತೋರುವ ಗುರು ಇರುವರು ಹಿಂದೆ
ನಡೆಯೋಣ ಸದ್ಗುಣದಾದಿಯಲಿ
ಗುರಿ ತಲುಪೋಣ ಗುರುವಿನ ಮಾರ್ಗದರ್ಶನದಲಿ...

- Tanuja.K

20 Nov 2022, 12:55 am

ಮುಗಿದ ಪಯಣ

ಇದು ನನ್ನ ಕೊನೆಯ ಪಯಣ
ಮುಗಿದಿದೆ ಈ ಭೂಮಿಯ ಋಣ

ಕೊನೆಯ ಸವಾರಿ ಇದು
ಮಣ್ಣಿನೊಳಗೆ ಮಣ್ಣಾಗುವುದು


ಹೆತ್ತವರ ಕನಸಾಗಿದ್ದೆ ನಾನು
ನನ್ನ ಪರಿವಾರವ ಬಿಟ್ಟು ಬಂದೆನು


ಇನ್ನೆಂದೂ ಕಾಡುವುದಿಲ್ಲ ಸಂಬಂಧ
ಮುಗಿದಿದೆ ಎಲ್ಲಾ ಅನುಬಂಧ


ನೆನಪುಗಳು ಮಾತ್ರ ನನ್ನವರಿಗಿನ್ನು
ದೇಹವಿಲ್ಲದ ಆತ್ಮವು ಮಾತ್ರ ನಾನು


ಪಾಪ ಪುಣ್ಯಗಳ ಲೆಕ್ಕಾಚಾರ ದೇವರಿಗೆ
ನಾ ಹೊರಟಿರುವೆ ಮಸಣದ ದಾರಿಗೆ


ಚಿರ ನಿದ್ರೆ ಪ್ರಾರಂಭವಾಗಿದೆ ನನಗೆ
ಇಂದು ಅಂತಿಮ ಯಾತ್ರೆ ಮುಗಿದಿದೆ


ಯಾರ ಮಡಿಲಲೆ ಬೆಳೆದರು
ಕೊನೆಯ ಹೆಗಲು ಪರರದು


ಉಸಿರು ಮಾತ್ರ ತಂದೆ ಇಳೆಗೆ
ಹೆಸರು ಕೂಡ ಉಳಿಯಲಿಲ್ಲ ಕೊನೆಗೆ


ಆಗ ಜನನವೆಂದು ಜಾತಕ ಬರೆಸಿದರು
ಈಗ ಮರಣವೆಂದು ಸೂತಕ ತೆಗೆಯುವರು


ಮುಗಿದ ಅಧ್ಯಾಯ ನನ್ನದು
ಅಂತಿಮ ಧನ್ಯವಾದ ಧರಣಿಗಿದು


- Tanuja.K

20 Nov 2022, 12:54 am

ವಿಸ್ಮಯದ ಕ್ಷಣ

ನನಗೆ ಇನ್ನೂ ನೆನಪಿದೆ
ಅದೊಂದು ವಿಸ್ಮಯದ ಕ್ಷಣ!
ಸುಮ್ಮನೆ ತಲೆ ಎತ್ತಿ ಶೂನ್ಯದತ್ತ ದೃಷ್ಠಿಸಿದೆ
ಕಳೆದ ದಿನಗಳ ಅದ್ಭುತ ದೃಶ್ಯಕಾವ್ಯವೊಂದು
ಕಣ್ಣೆದುರು ಹಾದು ಹೋಯಿತು
ಅದು ಸುಂದರ ಮತ್ತು ಅಪ್ಯಾಯತೆಯ
ಒಟ್ಟಾರ್ಥದಂತಿತ್ತು.

ನನ್ನ ಅಸಹಾಯಕತೆ ಮತ್ತು ಸಿಟ್ಟನ್ನು ತಣಿಸುವಂತೆ,ಲೌಕಿಕ ಬಯಕೆಗಳಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದೆ!


ಮನಸ್ಸಿಗೆ ಹಿತವೆನಿಸುವ ನಿನ್ನ ಮಾತುಗಳು
ಮರೆತು ಬಹಳ ದಿನಗಳಾಗಿದ್ದವು
ಹಾಗೆ ನಿನ್ನ ಆಕರ್ಷಕ ವ್ಯಕ್ತಿತ್ವವು ನನ್ನ
ಕನಸುಗಳನ್ನು ಕಾಡುವುದನ್ನು ಕೂಡ!


ಕಾಲ ಸರಿಯಿತು, ಸಣ್ಣದೊಂದು ಬಂಡಾಯದ ಬಿರುಗಾಳಿಯ  ಸ್ಪೋಟ
ನಿನ್ನೆಡೆಗಿನ ಒಂದು ಕಾಲದಲ್ಲಿ ನನ್ನದೆಂದುಕೊಂಡಿದ್ದ ಬಾವನೆಗಳನ್ನ ಛಿದ್ರಗೊಳಿಸಿತ್ತು
ನಿನ್ನ ಸವಿಮಾತುಗಳನ್ನು, ನಿನ್ನ ವ್ಯಕ್ತಿತ್ವದ ವಿಶೇಷತೆಗಳನ್ನು ಸಹ ಮರೆತುಹೋಗಿದ್ದೆ.


ಅವು ನನ್ನ ಬದುಕಿನ ಒಂಟಿತನದ ಕರಾಳ ದಿನಗಳು
ಆಗಾಗ ಸಂಜೆಗೆಂಪಿನ ಆಕಾಶವನ್ನು ದಿಟ್ಟಿಸುತ್ತಿದ್ದೆ
ಯಾವ ಸಿದ್ದಾಂತಗಳು, ಯಾವ ಮಾತು - ಕೃತಿಗಳು ನನ್ನಲ್ಲಿ ಜೀವನೋತ್ಸಾಹ ಉಕ್ಕಿಸುತ್ತಿರಲಿಲ್ಲ
ನನ್ನನ್ನು ಪ್ರೀತಿಸುವರು, ನನ್ನವರು ಯಾರು ಇಲ್ಲದಂತಾಗಿತ್ತು

ಆಗ ಬಂತೊಂದು ಅಪೂವ೯ ನವ-ಚೈತನ್ಯದ ಕ್ಷಣ
ಮೇಲೆ ನೋಡಿದೆ, ಮತ್ತೆ ಅಲ್ಲಿ ನೀನು ?
ಅದೊಂದು ಅದ್ಭುತ ದೃಶ್ಯ ಕಾವ್ಯ
ಅಪರೂಪದ ಪ್ರೀತಿ ಮತ್ತು ಆತ್ಮೀಯತೆಯು ಸಾರಾಂಶದಂತಿತ್ತು
A translation

- ಶಶಿಧರ ಹೆಚ್ ಎನ್

19 Nov 2022, 11:02 am

ಸ್ನೇಹ ಬಂಧ

ಪರಿಚಯಕೆ ಬೇಕಿಲ್ಲ ಏನು ಕಾರಣ
ಮುಗ್ಧನಗುವೇ ಈ ಸ್ನೇಹಕೆ ತೋರಣ
ನೂರಾರು ಬಂಧಗಳು ಒಂದೇ ರೂಪದಲ್ಲಿ
ದೈವವಿತ್ತು ಸ್ನೇಹವೆಂಬ ವರದ ಹೆಸರನಲಿ..

ಕರಗುವ ಕಂಬನಿಗೂ ನೀನೆ ಬೇಕಂತೆ ನೋಡು
ನೊಂದ ಹೃದಯಕ್ಕೂ ನಿನ್ನ ಮಡಿಲಂತೆ ನೀಡು
ಅರಿತೆ ಮೌನದಲಿಡಗಿಹ ಆ ನೂರು ಭಾವದ
ನುಡಿಸಿದೆ ನೀ ಹೃದಯ ವೀಣೆಯ ಮೌನ ರಾಗವ..

ಸಿರಿತನವು ಬೇಕಿಲ್ಲ, ಬಡತನವು ಸೋಗಿಲ್ಲ
ನೋವು ನಲಿವು ಹಂಚೋ ಆ ಭಾವ ಸಾಕಲ್ಲ
ಕಷ್ಟ ದಲ್ಲಿ ಹೆಗಲಾಗಿ ಬೇಸತ್ತ ಹೆಜ್ಜೆಗ್ಗೆ ನೆರಳಾಗಿ
ನಿಂತೇ ಪ್ರೇಮಿಯ ಪ್ರೀತಿಯ ಮೀರಿಸೋ ಪರಿಯಾಗಿ..

ನಿಸ್ವಾರ್ಥ ರೂಪದಲ್ಲಿ ಪ್ರತಿಫಲಿಸೋ ಜ್ಯೋತಿಯೂ
ಮನದ ತಮವ ಕಳೆವುದು ಸ್ನೇಹದ ಹಣತೆಯು
ಬರದಿ ಬೀಸೋ ಗಾಳಿಗೇನು ಬರವಿಲ್ಲ ಇಲ್ಲಿ
ಆದರೂ ಆರದಂತೆ ಸದಾ ಉರಿಯುವುದು ನೋಡಿಲ್ಲಿ..

ಸ್ವಾತಿ S...........

- Swati S

17 Nov 2022, 01:15 am

ಬೆಟ್ಟದ ಹೂ

ಅದೋ ಅಲ್ಲಿ , ಅರಳಿದೆ ನೋಡು
ಕೃಷ್ಣವರ್ಣದ ,ಸುಹಾಸದ,
ಸುವಾಸದ ಬೆಟ್ಟದ ಹೂ.
ಬೀಸುವ ತಂಗಾಳಿಗೆ ತಲೆದೂಗುವ,
ದುಂಬಿಗಳ ಕೈ ಬೀಸಿ ಕರೆಯುವ,
ಮನಮುಟ್ಟುವ ಬೆಟ್ಟದ ಹೂ.
ಹಾರುವ ಮೋಡಗಳ ಕೈಬೀಸಿ ಕರೆಯುವ,
ಇಂದ್ರಚಾಪಕೆ ಕೊರಳನು ಚಾಚಿ,
ನಲಿನಲಿಯುವ ಬೆಟ್ಟದ ಹೂ.
ಮಾಲಿನ್ಯದ ಎಣೆ ಇಲ್ಲದೆ,
ಮಾನವನ ಹಂಗಿಲ್ಲದೆ,
ನಸುಸಂಜೆಗೆ ಕಾಯ್ವ ಬೆಟ್ಟದ ಹೂ

- ಅರುಣಕುಮಾರ ಮ ಜೇವರಗಿ

16 Nov 2022, 08:36 pm