Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

.

ನನ್ನೆದೆಯ
ಮೌನ ಭಾವ ಕಣ್ಣಲ್ಲಿ ತುಂಬಿ ......
ರಂಗು ರಂಗಿನ ಗೆಜ್ಜೆ ಕಟ್ಟುವ ಬಾ ಗೆಳತಿ.....
ನನ್ನ ಪ್ರೇಮದ ಕಂಪನದ ದ್ವನಿಯಾಗಿ.....
ಲಯ ತಪ್ಪಿದ ತಾಳದಲ್ಲಿ....
ಪ್ರೀತಿ ಹೆಜ್ಜೆಯ ಗೆಜ್ಜೆ ಕಟ್ಟುವೆ ಬಾ ಗೆಳತಿ....
ಇಂತಿ ನಿನ್ನ ಪ್ರೀತಿಯ ......

- Shankru Badiger

12 Dec 2022, 10:08 pm

ಮುಗ್ಧ ಮಗು

ರಾತ್ರಿ ವೇಳೆ ರಾಜುವಿನ ತಾಯಿ ಅವನಿಗೆ ಊಟ ಮಾಡಿಸುತಿದ್ದಾರೆ . ಆಗ ಮೇಲೆ ನೋಡಿದ ರಾಜು)
ರಾಜು :-ಅಮ್ಮ ಮೇಲೆ ಏನಿದೆ?
ಅಮ್ಮ :- ಆಕಾಶ
ರಾಜು:-ಹೌದಾ? ಅದರಲ್ಲಿ ಕೆಲವು ಚುಕ್ಕಿ ಹಾಗೆ ಇದೆ.
ಆ.. ಅದೇನು ಚಪಾತಿ ಹಾಗೆ ಇದೆ??
ಅಮ್ಮ: ಮಗು ಅದು ಚುಕ್ಕಿ ಅಲ್ಲಪ್ಪ ನಕ್ಷತ್ರ. ಅದು
ಚಪಾತಿ ಅಲ್ಲಾ ಚಂದ್ರ ಕಣೋ
ರಾಜು : ಹೌದಾ ನಾನು ಚಂದ್ರನ ಜೊತೆ
ಮಾತನಾಡುತ್ತೇನೆ.
ಅಮ್ಮ: (ನಗುತ್ತಾ) ಆಯ್ತು
( ಅಮ್ಮ ಮಲಗಲು ಹೊರಟರು)
ರಾಜು: ಚಂದ ಮಾಮ .......
( ರಾಜುವಿನ ಮುಗ್ಧತೆಗೆ ಚಂದಿರ ಪ್ರತ್ಯಕ್ಷನಾದ)
ಚಂದ್ರ: ಏನು ರಾಜು
ರಾಜು: ಏನು ಇಲ್ಲ ಇಡೀ ಹಳ್ಳಿ ಜನ ಮಲಗಿದ್ದಾರೆ.
ನೀನು ಮಲಗೂದಿಲ್ಲವಾ?
ಚಂದ್ರ: ಇಲ್ಲಪ್ಪ ನಾನು ಮಲಗಿದ್ರೆ ಹಳ್ಳಿಗೆ ಬೆಳಕು
ನೀಡೋರು ಯಾರು? ಅಲ್ವಾ
ರಾಜು : ಹೌದು ಆದ್ರೆ ನಿನ್ ಮನೆ ಎಲ್ಲಿದೆ?
ಚಂದ್ರ : ನನಗೆ ಮನೆ ಇಲ್ಲ ಪುಟ್ಟ
ರಾಜು : ಹಾಗಾದ್ರೆ ನಿಂಗೆ ಚಳಿ ಬಿಸಿಲು ಆಗಲ್ವಾ
ಚಂದ್ರ: ನಾನು ಹಗಲಲ್ಲಿ ಇರೋದಿಲ್ಲ . ಬಾನಿನಲ್ಲಿ ಚಳಿ.ಅನಿಸುವುದಿಲ್ಲ. ಇಲ್ಲಿ ಕಾಮನಬಿಲ್ಲು

- Nisha anjum

12 Dec 2022, 07:40 pm

ತವರೂರ ಮಗಳು

ಹರಸು ದೇವ ಏನ್ನ ತವರಿಗೆ ||೨||

ಕದವ ಬಡಿಯೋರು ಯಾರು ಹೆಸರ ಕರೇವರಾರು
ನಿಮ್ಮ ಹೆಸರ ಹೇಳಿರಿ
ಬರಲಿಲ್ಲ ನನ ರಾಯ ಬಂದಾಗ ನಿಮ್ಮ ನೆನಿತಿನಿ.

ನನ್ನ ತಂಗಿ ಇಲ್ಲವಳೇ ಲಕುಮಿ ಹಂಗ ಕಾಣುತ್ತಾಳೆ
ಅವಳ ಕರೆಯೋಕೆ ಬಂದೀವ್ನಿ ಜಾತ್ರೆಗೆ..

ಅಪ್ಪಾ ಚಂದಾಗವ್ರ ಅವ್ವ ಚಂದಾಗವ್ರ ನೀನು
ಹೇಗಿದ್ದೀಯ ಅಣ್ಣಯ್ಯ??

ಮಾದಪ್ನ ದಯೆಯಿಂದ ಇಬ್ರೂ ಚಂದಾಗವರೆ
ನಿನ್ನ ನೆನೆದು ಅಳುತಾರೆ ಜಾತ್ರೆಗೆ ಕರೆಯಲು ನನ್ನ
ಕಳುಹೋರೆ

ಉಡುಗೊರೆ ಬೇಡಣ್ಣ ನೀನೇ ಸಾಕಣ್ಣಾ
ಆಟು ದೂರದಿಂದ ಬಂದಿಯೋ ನನ್ನ ಅಣ್ಣ
ಮಾಡ್ತೀನಿ ನಿನ್ನ ಹೊಟ್ಟೆ ತಣ್ಣಗೆ

ಮುಳಗುಂದ ಮಾಂತಾಜ್ಜ ನ ಜಾತ್ರೆ ಬಂದೇತಿ
ನಾವು ಅಲ್ಲಿಗೆ ಹೊಂಟೀವಿ
ನೀನು ನಿನ್ನ ಪರಿವಾರ ಕರಕೊಂಡು ಬಾರ್ಯವ್ವ
ಆ ದೇವ ನಮಗೆಲ್ಲ ಒಲಿತಾನ

ಉಡುಗೊರೆ ಕೊಟ್ಟಾಳ ನಿನಗ ಹೆತ್ತವ್ವ
ನೀನು ಖುಷಿಯಿಂದ ಇರಬೇಕಂತೆ

ನತ್ತು ಗೆಜ್ಜಿ ಓಲೆ ಮಾಲೆ ಬಳೆ ಎಲ್ಲವ
ಕೊಟ್ಟು ಕಳಿಸ್ಯಾಳ ನಿನಗಾಗಿ

ಇಳಕಲ್ ಸೀರೆ ಉಟ್ಟು ಕುಂಕುಮ ಹಚ್ಚಿಕೊಂಡು
ಹೂ ಮುಡ್ಕೊಂಡು ಬಾರ ಯವ್ವ ಗಂಡ ಮಕ್ಕಳು
ಕರಕೊಂಡು

ಹೊಂತಿನಿ ಅವ್ವ ಊರಿಗೆ
ಮರೆಯದೆ ಬಾರ್ಯವ್ವ ಜಾತ್ರೆಗೆ .....

- Nisha anjum

12 Dec 2022, 07:35 pm

ಸಾಗಬೇಕು_ಸದಾ_ನಿನ್ನೊಡನೆ...

"ನಿನ್ನ ನಗುವೆ ಸಾಕು ನನಗೆ..
ತಳ್ಳೋದಕ್ಕೆ ಬದುಕ !
ನಿನ್ನ ಅಂದ_ಚೆಂದಕೊಂದು..
ಹೋಲಿಕೆ ಹುಡುಕೋ ತವಕ !
ಕಣ್ಣಂಚಲ್ಲೆ.. ಮಾತನಾಡೋ ಚೆಲುವೆ !
ನಿನ್ನ ಸನ್ನೆಯಲ್ಲೆ.. ನಾ_ಅರಿತಿರುವೆ !
ಜೊತೆಯಾಗಿ ! ಹಿತವಾಗಿ !
ಸಾಗಬೇಕು_ಸದಾ_ನಿನ್ನೊಡನೆ !!"
"ಉಹೆಗೂ ಬೇಡವದು..
ನೀ_ಇಲ್ಲದ ಜೀವನ !
ಸಂಬಂಧವೇ ಇಲ್ಲ ನನಗೆ..
ನಿನ್ನ_ಹೊರೆತ ಸ್ವಪ್ನ !
ಕಾಯುವೆನೆ ! ಬಾಳುವೆನೆ !
ನಿನಗಾಗಿ.. ನಾ_ಸದಾ ಎಂದು !!"
ಎಮ್.ಎಸ್.ಭೋವಿ...✍️

- mani_s_bhovi

10 Dec 2022, 10:34 pm

ಅಪಶಕುನ.....!

ಕಂಬನಿಯ ಮಿಡಿತ ಸೇರಲು
ನನ್ನ ಒಡಲಲ್ಲಿ
ಅಯ್ಯೋ ಏನೋ ತಳಮಳ
ಒಳಗೆ ಓಡಿದೆ ಆಗ
ಬೀಳಲು ಹಲ್ಲಿ ರಾಯ
ಅಪಶಕುನ ಎಂದು
ಬಾಗಿಲ ಮುಚ್ಚಿದೆ .
ಬಾಗಿಲಲ್ಲೇ ನನ್ನ ವಿಧಿ ಯ
ಅಲಿಸೆದಂತೆ ಎನಿಸಿ ಒಳ ಓಡಿದೆ
ಹೊರಗೆ ಏನೋ ಶಬ್ದ
ಜೋರಾಗಿ ಹಾಡು ಹಾಡಿದೆ ಭಯದಿಂದ
ಮುಂಜಾವು ಹುಂಜದ ಕೂಗು
ಕೇಳಿದ ನನ್ನ ಕಿವಿ
ತೆರೆಯಲು ಬಾಗಿಲು
ಬಾಗಿಲಲ್ಲಿ ಬಿದ್ದಿದೆ ನನ್ನ ಶ್ವಾನದ
ಸುಂದರ ಪ್ರೀತಿಯ ಶವ
ಅಪಶಕುನವೇ ನನ್ನ ಕಣ ಕಣದಲ್ಲೂ
ಮನದಲ್ಲೂ ಮನೆ ಮಾಡಿ
ಕೊಂಡಿದೆ ನನ್ನ ಪ್ರೀತಿಯ....!

- Nisha anjum

08 Dec 2022, 06:21 pm

ಕನ್ನಡ

ನಮ್ಮಕನ್ನಡವೇ ಸುಂದರ
ಸುಮಧುರ ಮಂದಾರ
ಯಶಸ್ಸಿನ ಕಂದರ
ಒಲವಿನ ಮಮಕಾರ ನಯನ ಮನೋಹರ

ಮಾನವ ಮುಚ್ಚುವ ಖಾದಿ ಬಟ್ಟೆಯೂ
ಮಾನವನೇ ಮೆಚ್ಚುವ ವೀಣೆಯ ನಾದವೂ
ಶೌರ್ಯ ವ ಕಲಿಸೋ ವನಿತೆಯರು
ಹುಳಿಗು ಮಣಿಸುವ ಕಲಿ ಶೂರರೂ||ನಮ್ಮ||

ಶಿಲ್ಪವೇ ತುಂಬಿರೋ ಬೇಲೂರು ಹಳೆಬೀಡು
ಕಲ್ಪಕು ನಿಲುಕದ ಜೋಗದ ಬಂಡಿ
ಮೈಸೂರು ಮಂಡ್ಯ ಉತ್ತರ ಕನ್ನಡ
ಬೆಂಗಳೂರು ಬೆಳಗಾವಿ ದಕ್ಷಿಣ ಕನ್ನಡ || ನಮ್ಮ||

ಹೆಣ್ಣುಗಳಲ್ಲ ಅಕ್ಕ ಅಮ್ಮ
ಗಂಡುಗಳೆಲ್ಲ ಅಣ್ಣ ತಮ್ಮ
ಸೋದರ ಸೋದರಿ ನಾವೆಲ್ಲ
ಇಂತಹ ಬೀಡು ಜಗದಲೆ ಇಲ್ಲ.||ನಮ್ಮ||

- Nisha anjum

08 Dec 2022, 06:21 pm

ಹೇ ಗೆಳತಿ

ನಿನ್ನ ಮೇಲಿನ ಆಕರ್ಷಣೆಯಲ್ಲ

ನಿನ್ನಲ್ಲಿನ ಸೌಂರ್ದಯ ನೋಡಿ

ಉಕ್ಕಿ ಬಂದ ಭಾವನೆಯಲ್ಲ.

ಕೇಳಿಸಿಕೊ.....

ನೀನಿಲ್ಲದ ಈ ಸಮಯವೇ ಹೋಗುತ್ತಿಲ್ಲ

ನಿನ್ನನ್ನೇ ಕಾಣಲು ಮನಸ್ಸು ಮತ್ತೆ ಮತ್ತೆ

ಹಾತೊರೆಯುತ್ತಿದೆ...

ನೀ ಹೀಗೆ ಕಾಡಿದರೆ ಹೇಗೆ ಗೆಳತಿ...??

ಎಮ್.ಎಸ್.ಭೋವಿ....✍️
..
..
...
..
.

- mani_s_bhovi

07 Dec 2022, 02:24 pm

ದಿನಕರ

ಹೇ ದಿನಕರ ಏನು ನಿನ್ನ ನೀತಿ
ನಿನ್ನ ಉದಯಕ್ಕಾಗಿ ಕಾಯುವುದು ಪ್ರಕೃತಿ


ಯಾರ ಹಂಗಿಲ್ಲ ನಿನಗೆ
ನೀನೇ ಬೆಳಕು ಬದುಕಿಗೆ
ನೀ ಬಂದರೆ ಜಗವು ಬೆಳಗುವುದು
ಅಜ್ಞಾನ ಸರಿದು ಜ್ಞಾನ ಮೂಡುವುದು..

ಏನು ನಿನ್ನ ಸಮಯ ಪಾಲನೆ
ಎಲ್ಲವೂ ಇಲ್ಲಿ ಕಾಲ ಗಣನೆ
ಯಾರಿಲ್ಲದಿದ್ದರು ಬರುವೆ ನೀನು
ಬದುಕಿನುದ್ದಕ್ಕೂ ಜೊತೆಗಾರ ನೀನು..

ಸಮಯಕ್ಕೆ ತಕ್ಕ ಬದಲಾವಣೆ ನಿನ್ನದು
ನಿನ್ನ ಕರ್ತವ್ಯ ಮಾತ್ರ ನಿಲ್ಲದು
ಕಾಲಗರ್ಭದಲಿ ಎಲ್ಲವು ಸೇರುವುದು
ಏಕಾಂಗಿಯದರು ನಿನ್ನ ದಿನಚರಿ ನಿಲ್ಲದು...

- Tanuja.K

03 Dec 2022, 10:41 pm

ಅನಾಮಿಕ

ನಲ್ಮೆಯ ಮನಸಿನ ಚಂದದ ನಾಯಕ
ನನ್ನ ಜೀವನದ ಅನಾಮಿಕ..

ದಿನಗಳು ಕಳೆದವು
ಕನಸುಗಳು ಕಾಲ ಗರ್ಭದಲಿ ಅಳಿದವು
ವರುಷಗಳು ಉರುಳಿದವು
ಜವಾಬ್ದಾರಿಗಳು ಬೆನ್ನೇರಿ ಬಂದವು...


ಎಲ್ಲಿರುವೆಯೋ ತಿಳಿದಿಲ್ಲ ನೀನಿನ್ನು
ಕಾಲಕ್ಕೂ ಕಾಯಿಸುವ ಆಸೆ ನನ್ನನ್ನು
ದೂರದೂರಿನ ಗೆಳೆಯ ನನ್ನವನು
ಸಮಯದ ಬೊಂಬೆ ನಾನಿನ್ನು....

- Tanuja.K

03 Dec 2022, 10:26 pm

ಕವನದ ಶೀರ್ಷಿಕೆ ಸಮಾನತೆ.

ವಿಶ್ವಸಂಸ್ಥೆಯ ಧೇಯವಾಗಿರುವ ಐಕ್ಯತೆ ಮಂತ್ರ,
ಮನುಜರೆದೆಯಲಿ ಮೂಡಬೇಕಿದೆ ಸಮಾನತೆ ಸೂತ್ರ.
ಪ್ರಕೃತಿ ಕೊಡುವ ನ್ಯೂನ್ಯತೆಗಳಿಗೆ ತಡೆ ಇದೇ ಏನು?
ಸಂಭವಿಸಿರುವ ಘಟನೆಗೆ ಸಿಲುಕಿ ಕೊರಗುವ ನಾವು
ಮಾಡಿದ ತಪ್ಪೇನು?
ಮಗುವು ಸ್ನೇಹದಿ ನಲಿಯಲು ಸಿಗಬೇಕು ತನ್ನವರಿಂದ ಸಹಕಾರ,
ವಿಕಲತೆಯ ಮರೆತು ಮಗು ಪಡೆಯುವಂತಾಗಬೇಕು
ಸಮನ್ವಯ ಶಿಕ್ಷಣದ ಸಾಕ್ಷಾತ್ಕಾರ.
ನಮಗಿಂದು ಉಲ್ಬಣಿಸೋ ಭೀಷ್ಮನಂತ ಕಷ್ಟಗಳ
ಚೈತನ್ಯದಿಂದ ಚಿವ್ತುವ ಬನ್ನಿ ಸಮಾಜದೊಳು ನಾವು ಬೆಲ್ಲದ ಸಿಹಿಯಾಗಿ.
ಸಮುದಾಯದಿ ಹರಡಿರೋ ನ್ಯೂನ್ಯತೆ ಮೇಲಿನ ಸಂದೇಹದ ಕಿಡಿಯ
ಸ್ವಾವಲಂಬನೆ ಬೆವರ ಹನಿಗಳಿಂದ ಆರಿಸಿ
ನಾವ್ ಕಿತ್ತೊಗೆಯುವ ಬನ್ನಿ ಅಸಮಾನತೆ ಕಳೆಯ.
ಎಲ್ಲರಿಂದ ಸಿಗಬೇಕು ನಮ್ಮ ಪ್ರಗತಿಗಾಗಿ ಪ್ರೇರಣೆ,
ಅಂತಹ ಸಮಗ್ರ ಸಮಾಜ ಸೃಷ್ಟಿಸುವುದು ನಮ್ಮೆಲ್ಲರ ಹೊಣೆ,
ಜಾಗೃತಿಗೊಂಡ ಜನತೆಯಿಂದ ಬಯಸದೆ ಲಭಿಸುವುದು
ವಿಕಲಚೇತನರಿಗೆ ಸಾಂವಿಧಾನಿಕ ರಕ್ಷಣೆ.

- nagamani Kanaka

03 Dec 2022, 09:59 pm