ಎಲ್ಲರಿಗೂ ಖುಷಿಯನ್ನ ಬಯಸ್ತಿನಿ ನಾನು..
ಕಷ್ಟಗಳಿದ್ರು ಕಣ್ಣೀರಿಗೂ ಅಂಜಿಕೆ ಆಗುವಷ್ಟು
ನಗಸ್ತಿನಿ...
ಆದ್ರು ಕೊನೆಯಲ್ಲಿ ನನ್ನನ್ನೇ ಅಳಿಸಿಬಿಡ್ತಾರೆ....
ಎಲ್ಲರ ನೋವುಗಳಿಗೂ ಸ್ವಂದಿಸ್ತಿನಿ ನಾನು..
ಸಂಭಂದ ಇಲ್ದೇ ಇದ್ರು ಸಮಯಕ್ಕು
ತಲೆಕೊಡದೆ ಸಮಧಾನಿಸ್ತಿನಿ...
ಆದ್ರು ಕೊನೆಯಲ್ಲಿ ನನ್ನ ಸಮಯ ಕೆಲವರಿಗೆ
ಕಾಲಹರಣವಾಗಿ ಬಿಡುತ್ತೆ....
ಯಾರೆ ಆಗ್ಲಿ,
ಕೊಟ್ಟ ಮರ್ಯಾದೆಯನ್ನ ಕಾಪಾಡಿಕೊಳ್ಳಬೇಕು..
ಸಿಕ್ಕ ವ್ಯಕ್ತಿಯನ್ನ ಉಳಿಸಿಕೊಳ್ಳಬೇಕು....
ಎಮ್.ಎಸ್.ಭೋವಿ...✍️
ಪ್ರೀತಿಯ ಅಲೆಯಲಿ
ತೇಲುವ ಆಸೆಯಾಗಿದೆ ಗೆಳೆಯ,
ಕೈ ಬಿಡಬೇಡ ನನ್ನ ಕೊನೆ ಉಸಿರಿರುವ ತನಕ..
ಪ್ರೀತಿ ಬೇಕು ಮನಕೆ,
ಪ್ರೀತಿಸುವ ಹೃದಯ ಬೇಕು ಜೀವಕೆ..
ಎಂಥ ಮಾಯೆ ಈ ಪ್ರೀತಿಯು,
ಒಲಿದವರಿಗೆ ಮಾತ್ರ ಸಿಗುವುದು
ಸಮಾಧಾನ ತೃಪ್ತಿಯು..
ಕಾದಿದೆ ಮನ ನಿನಗಾಗಿ
ಬಳಲಿದ ಬದುಕಿಗೆ ಬಾ ತಂಗಾಳಿಯಾಗಿ..
ಹೀಗೆಂದು ಆಗುತ್ತದೆಂದು ತಿಳಿದಿರಲಿಲ್ಲ
ನಾನೇಕೆ ಹೀಗಾದೆ..
ಕಾಯುವಿಕೆಯು ನನ್ನಲ್ಲೂ ಇರುವುದೇ.....??
ಪ್ರೀತಿ ಇರದೆ ಸ್ನೇಹ ಬರುವುದೇ...??
ಕನಸಿನ ಕನವರಿಕೆಗೆ ಕಾರಣ ನೀನು
ಮನಸಿನ ಮಾತಿಗೆ ಮಂದಾರ ನೀನು
ಕಾಲ ಕಳೆಯುವುದು ಬೇಡವೆಂದರೂ..
ನಿನ್ನ ಜೊತೆಗಿರುವೆ ನಾ ಎಲ್ಲಿದ್ದರೂ..
ನಿನ್ನ ಮನದಲ್ಲೊಂದು ಪುಟ್ಟ ಜಾಗ ಕೊಡು ನನಗೆ..
ನಾ ಅಲ್ಲೆ ಬಂಧಿಯಾಗುವೆ ಬೆಚ್ಚಗೆ...
ನಿದಿರೆಯಲಿ ಕಾಡುವೆ ಏಕೆ ನೀರೆ
ಕಣ್ಣೆದುರಿದ್ದರು ಯಾಕೀ ಮೌನ ಒಲವೆ...??
ಬೇಡವಾಯಿತೆ ನನ್ನೀ ಪ್ರೀತಿ
ಬದುಕಲಾರೆ ನಿನ್ನ ರೀತಿ
ಹೇಗಿರುವೆ ನೀನು ನನ್ನನಗಲಿ
ಕಲಿಸಿಕೊಡು ನೀನಿರುವ ಪರಿ
ಮನಬಿಚ್ಚಿ ಮಾತಾಡು ಒಮ್ಮೆ
ಅಪ್ಪುಗೆಯಲಿ ಬಂಧಿಸುವೆ ಸುಮ್ಮನೆ
ಸಾಕು ಗೆಳತಿ ಈ ದೂರ
ನೀ ಬೇಕು ಇನ್ನೂ ಹತ್ತಿರ
ನನ್ನ ಮನದ ದೇವತೆ ನೀನು
ಕಾಯುವೆ ಪ್ರತಿ ಜನುಮ ನಾನು...