ನೋವನ್ನುಂಡು ಸಂತಸದ ಕಂಪನ್ನು ಹರಡಿಸಿ
ಮಮತೆಯ ಮಳೆಯನ್ನು ಸುರಿಸುವಳು ಹೆಣ್ಣು
ಅಮ್ಮನಾಗಿ, ಅಕ್ಕ,ತಂಗಿ,ಹೆಂಡತಿಯಾಗಿ
ಬದುಕಿನ ಜವಾಬ್ದಾರಿ ನಿರ್ವಹಿಸುವಳು ಹೆಣ್ಣು!
ಹೆಣ್ಣೆಂದರೆ ಸಹನೆ, ಶಾಂತಿ,ಪ್ರೀತಿ ವಿಶ್ವಾಸ
ಹೆಣ್ಣೆಂದರೆ ಮತ್ತೊಂದು ಜೀವಕೆ ಉಸಿರು ನೀಡುವಳು
ಕನಸುಗಳಿಗೆ ರೂಪವಾಗಿ,ಪದಗಳಿಗೆ ನಿಲುಕದವಳು
ಎಲ್ಲವೂ ಅವಳಿಂದಾದರೂ, ಒಂಚೂರು ಗರ್ವಪಡದವಳು!
ಪುರುಷರಿಗೆ ಸರಿಸಮನಾಗಿ ಸ್ವತಂತ್ರವಾಗಿ ಬದುಕಬಲ್ಲಳು
ಆದರೂ ಆಕೆ ನರಳುತ್ತಿದ್ದಾಳೆ ದೌರ್ಜನ್ಯದಡಿಯಲ್ಲಿ ಸಿಲುಕಿ
ಸ್ವಾವಲಂಬಿಯಾಗಿ ಬದುಕಲು ಬಿಡರು ಸಮಾಜದ ನಡುವಿನಲ್ಲಿ
ಹೆಸರಿಗಷ್ಟೇ ಮಹಿಳೆ ಒಬ್ಬಂಟಿಯಾಗಿ ಓಡಾಡಲು ಸ್ವತಂತ್ರಳು!
ತಡೆಯಬೇಕಿದೆ ಹೆಣ್ಣು ಭ್ರೂಣಹತ್ಯೆ,ವರದಕ್ಷಿಣೆ,ತಾರತಮ್ಯ,ಅತ್ಯಾಚಾರಗಳನ್ನು
ಸಮಾಜದ ಕಣ್ಣುಗಳಾಗಬೇಕಿದೆ ಮಮತೆ,ನಂಬಿಕೆ,ನೈತಿಕ ಮೌಲ್ಯಗಳು
ಹೀಗಾಗಿದ್ದಲ್ಲಿ ಮಾತ್ರವೇ ಮಹಿಳಾ ದಿನಾಚರಣೆಗೊಂದು ಅರ್ಥ
ಇಲ್ಲವಾದಲ್ಲಿ ಈ ಆಚರಣೆ ನಡೆಸುವುದು ವ್ಯರ್ಥ!
ಬಾನಂಗಳದಲ್ಲಿ ನೇಸರನು ಬರುವ ಮುಂಚೆ
ನೀ ತೊಡುಗುವೆ ನಿನ್ನ ಕಾಯಕದಲ್ಲಿ.
ನಿನಗೆ ಯಾರೇ ಸರಿಸಾಟಿ ಈ ಜಗದಲ್ಲಿ.
ಎಷ್ಟೇ ಕಷ್ಟ ಬಂದರು ನೀ ಹೊಳೆಯುವೆ ಕನ್ನಡಿಯಂತೆ.
ತಾಯಿಯಾಗಿ, ಸತಿಯಾಗಿ ಜೊತೆ ಬರುವೆ ನೆರಳಿನಂತೆ.
ಸಾವಿರಾರು ಸವಾಲುಗಳು ಎದುರಾದರೂ ನಡೆಯುವೆ ನೀ ದಿಟ್ಟ ಹೆಜ್ಜೆಯನಿಟ್ಟು.
ನಿನ್ನ ನೋವುಗಳನ್ನು ಪಕ್ಕಕೆ ಬಿಟ್ಟು.
ಮನೆ-ಮನೆಯಲ್ಲಿ ದೀಪ ಮೂಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ಸಂಸಾರದ ನೌಕೆ ಸಾಗಿಸುವ ಆಕೆ
ನಿನಗೆ ಬೇರೆ ಹೆಸರು ಬೇಕೆ .......?
ಸ್ತ್ರೀ ಅಂದರೆ ಅಷ್ಟೆ ಸಾಕೆ .....?
ಯೋಗಿತ.ಟಿ.ಎನ್.
ಯಾರು ಇಲ್ಲದ ಈ ಒಂಟಿ ಮನಕೆ,
ತೂಗು ಹಾಕಲೇ ಖಾಲಿ ಫಲಖ...!
ಮನವು ಕಾಡುತಿದೆ ನೀ ಯಾರೆಂದು ತೆರೆದು ನೋಡುವೆಯ ನನ್ನೆದೆಯ ಚಿಲಕ...!
ಎದೆಯ ಪಂಜರದಲ್ಲಿ ಬಚ್ಚಿಟ್ಟ ಈ ಪ್ರೀತಿ,
ಹಾರುತಿದೆ ಬಿಡುಗಡೆ ಸಿಕ್ಕಿದ ಪಕ್ಷಿಯ ರೀತಿ...!
ಆ ಹಾರುವ ಪಕ್ಷಿಯ ಯಾರೋ ಹಿಡಿಯುವ ಮುನ್ನ,
ಒಂದು ಬಾರಿ ಆದರೂ ತಟ್ಟಿನೋಡು
ನನ್ನ ಎದೆಯ ಬಾಗಿಲನ್ನ....!
ಎಮ್.ಎಸ್.ಭೋವಿ...✍️
ನಡೆಯುವ ಆಸೆ ನಿನ್ನೊಟ್ಟಿಗೆ ಕೈ ಹಿಡಿದು,
ಹೇಳಲಾಗದು ನಿನ್ನೆದುರು ನನ್ನುಸಿರ ಬಿಗಿ ಹಿಡಿದು...!
ತಿಳಿದು ತಿಳಿಯದೆ ಇರುವಂಥ ಈ ನಿನ್ನ ನಡವಳಿಕೆ,
ಮನದಿ ಮೂಡಿತಿದೆ ಒಂಟಿತನದ ಬೇಸರಿಕೆ...!
ಮರೆಯಲಾಗದ ನಿನ್ನ ನೆನಪಿನೊಟ್ಟಿಗೆ,
ಅರ್ಥವಾಗದ ಬದುಕು ನನ್ನದು...!
ಹರಿದು ಹೋಗುವ ಕಾಗದದ ಮೇಲೆ,
ಏನೆಂದು ಬರೆಯಬೇಕೋ ನನಗೆ ಅರಿಯದು...!
ಎಮ್.ಎಸ್.ಭೋವಿ...✍️
ಆಕೆ ಅಲ್ಲಿಯೇ ನಿಂತಿದ್ದಳು ದೂರದಲೆಗಳ ಅಬ್ಬರಕ್ಕೆ ಚಲಿಸದೆ ನಿಂತ ಚಿಗುರೆಳೆಯಂತೆ, ಕಾರ್ಮೋಡದ ಸದ್ದು ಕೇಳಿ ಹೆದರಿ ಅಡಗಿದ ಪುಟ್ಟ ಕಂದನಂತೆ, ಬೆಚ್ಚಗಿನ ಹಾಲಲ್ಲಿ ಬಿದ್ದ ಹುಳಿ ಮೊಸರಿನ ದೂರದಂತೆ, ಆಕೆ ಅಲ್ಲಿಯೇ ನಿಂತಿದ್ದಳು ಅಮ್ಮನ ಕಿರುಬೆರಳು ಸಿಗದ ಮಗುವಿನಂತೆ ಅವನ ದಾರಿ ಕಾಯುತ್ತಾ. ಆಗೊಮ್ಮೆ ಈಗೊಮ್ಮೆ ಸುಡು ಬಿಸಿಲಲ್ಲಿ ಇಣುಕಿನೊಡುವ ತಂಗಾಳಿಯಂತೆ ಅವನ ನೆನಪು ಬಂದಾಗ ಸಣ್ಣಗೆ ಕಂಪಿಸುವಳು ಮತ್ತೆ ಸಾವರಿಕೊಂಡು ಹಾದಿ ನೋಡುವಳು.
ಹಿಂದೆಂದೋ ಬರಿದಾದ ರೋಡಿನಲ್ಲಿ ಕೈ ಹಿಡಿದು ನಡೆದಾಗ ಕೇಳಿದಳಂತೆ ಎಲ್ಲಿಯ ವರೆಗೂ ಈ ನಡುಗೆ ಎಂದು ಅವನ ಉತ್ತರ ಇನ್ನೂ ಕೇಳಿಸಲಿಲ್ಲ ಅವಳಿಗೆ! ನನ್ನವನಾ ನೀನು ಗೊತ್ತಿಲ್ಲ ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ, ಮೌನ ಮುರಿಯುವ ಆಸೆಯೂ ಅವಳಿಗೆ ಇರಲಿಲ್ಲ ವರುಷಗಳುರುಳಿದವು, ತಾರೀಕುಗಳು ಬದಲಾದವು ಅವನ ಸುಳಿವಿಲ್ಲ ಮನೆಯಲ್ಲಲ್ಲ ಮನಸಲ್ಲಿ!! ಎದುರುಬದುರು ಕುಳಿತರು ಆತ್ಮೀಯತೆ ಕಂಡುಬಂದಿಲ್ಲ, ತನ್ನ ಸ್ವತ್ತೆಂದು ಕಟ್ಟಿಹಾಕಲಿಲ್ಲ ಅವನನ್ನು, ಸರಿ ತಪ್ಪುಗಳ ಲೆಕ್ಕ ಮೇಲಿನವನಿಗಿರಲಿ ಅವನ ಹೃದಯ ಸೇರುವ ರಸ್ತೆಯಲ್ಲಿ ಹಿಂದಿರಬಹುದು ನಾನು ಮುಂದೆ ಹೋದವರಿಗೆ ಪ್ರಾಶಸ್ತ್ಯ ಕೊಟ್ಟಿರಬಹುದು ಅವನು...
ತಾನು ತನ್ನದೆಂಬುದ ತೊರೆದವಳು ತನ್ನನ್ನೆ ತಾ ಕೊಟ್ಟವಳು ಅವಳಲ್ಲವೆ! ಹಿಂಪಡೆಯುವುದು ಎಷ್ಟು ಸರಿ ಇರಲಿ ಬಿಡು ಹಿಂಪಡೆದು ತಾನಾದರು ಏನು ಮಾಡಿಯಾಳು ಅಸ್ತಿತ್ವದ ಕಳುವಾದಮೇಲೆ.. ಇಹದ ಚಿಂತೆ ಬೇಡವಾದಮೇಲೆ, ಹಗಲು ಉರುಳಿತು ಹಕ್ಕಿಗಳೆಲ್ಲ ಅವಸವಸರದಿ ಗೂಡು ಸೇರಿದವು ತಾನು ಎದ್ದು ಹೊರಟಳು ನೆನ್ನೆಯ ಚಿಂತೆಗಳು ನಾಳೆಗೆ ಬಿಟ್ಟು ಮರುಳಿನ ಮೇಲೆ ಬರೆದ ಅವನ ಹೆಸರಿಗೆ ಸಿಹಿ ಮುತ್ತೊಂದನಿಟ್ಟು.
ಹೇಳಿ ಬಿಡಲೇ ಒಮ್ಮೆ..
ನನಗೆ ಪ್ರೀತಿಯಾಗಿದೆ ಎಂದು..
ಕೂಗಿ ಕರೆಯಲೇ..
ನಿನ್ನ ಹೆಸರ ಮನದುಂಬಿ ಇಂದು..
ಜೋಪಾದವಾಗಿದ್ದ ಹೃದಯ ಜಾರುತಿದೆ ನಿನ್ನೆಡೆಗೆ..
ಈ ಅನುಭವ ಹೊಸದು ನನಗೆ..
ಬರಿ ತನುವಾಗಿದ್ದೆ ನಾನು
ನಿನ್ನ ಪರಿಚಯದ ಮೊದಲಿಗೆ..
ಮನಸ್ಸೆಂದೂ ಇರಲಿಲ್ಲ
ಯಾರ ಮೇಲೂ ಹೀಗೆ..
ನಿನ್ನ ದಾರಿಯ ಕಾಯುತಿರುವೆ ನಾನು..
ಬರುವೆಯ ಜೊತೆಗೆ ನೆರಳಂತೆ ನೀನು...