Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜಾತಿನಾ..? ಪ್ರೀತಿನಾ..?

ಮನದಾಳ ಮಾತ ಮನಸೇರಿ ಕುಂತ
ಮಾಡಿದ ಪ್ರೀತಿ ನೀರಾಗ ಹರದ ಹೋತ
ಮಾಡಕೊಂಡ ಮಾತ ಗಟ್ಟ್ಯಾಗಲಿಲ್ಲ
ಕಟಗೊಂಡ ಕನಸ ನನಸಾಗಿ ಉಳಿಲಿಲ್ಲ

ನಿಂಬಿಯ ಗಿಡಕ ತುಂಬ್ಯಾವ ಬಾಳ ಮುಳ್ಳ
ಮಾಡಿದ ಪ್ರೀತಿ ನೋಡಿ ಹಚ್ಚ್ಯಾರ ಕುಳ್ಳ
ಮನಸ್ಸಿಗಿ ಇಲ್ಲ ಮನಿಯೋರು ಮದವಿಗಿ ಒಪ್ಪಲ್ಲ
ಜಾತಿ ಬ್ಯಾರಂತ ಬೇರಾಗಿದ್ದ ಪ್ರೀತಿ ಮುರದಾರಲ್ಲ

ಮನಸ್ಸೆಂಬ ಮನಿಯ ಬಾಗಿಲ ನೀ ತೆರದಿ
ಪ್ರೀತಿಯ ಸುದ್ದಿಕೇಳಿ ಬಿಡಿಸ್ಯಾರ ನಿಮ್ಮನಿ ಹಾದಿ
ತಗದೊಗ ಚೈನ ಬಡದಾರ ನನ್ನ ಬಾಳ
ಹಾದ್ಯಾಗ ಹೋಗಾಗ ಇನಕಿ ನೋಡ ನನ್ನ ಗೋಳ

ಹಾಳಾದ ಮನಸ್ಸ ಕಟಗೊಂಡ ಕುಂತ ನೂರಾರ ಕನಸ
ಮುಳ್ಳಿನ ಮನಸ್ಸು ಮನಿಯಾಗ ಮನಿಯವರಿಗಿ ಚುಚ್ಚಿ
ಮಾಡ್ಯಾದ ನಮ್ಮ ಪ್ರೀತಿಗಿ ಬಾಳ ದೂರ
ಒಂದೊಮ್ಮೆ ಬಂದ ನೋಡಿ ಹೋಗ ದೂರ

- Shankru Badiger

20 Mar 2023, 12:11 pm

ಹಗಲಿರುಳ ತಿರುಳ ತಿಳಿಯೋ ನೀ ದುರುಳ...

ಕತ್ತಲು ಬೆಳಕೊಳಗಿದೆ,
ಬೆಳಕು ಕತ್ತಲೊಳಗಿದೆ,
ಕತ್ತಲು ಬಂದಾಗ ಬೆಳಕು ಮರೆಯಾಗಿದೆ,
ಬೆಳಕು ಬಂದಾಗ ಕತ್ತಲು ಮರೆಯಾಗಿದೆ,
ಇರುವ ರವಿ ಅಲ್ಲೇ ಇರುವಲ್ಲೇ,
ಅಲೆವ ಶಶಿ ರವಿ ಇರುವಲ್ಲಿ,
ಹಗಲಲ್ಲೂ ಶಶಿ ಇರುವ ಮರೆಯಾಗಿರುವ,
ಇರುಳಲ್ಲೂ ರವಿ ಇರುವ ಮರೆಯಾಗಿರುವ,
ಹಗಲಿರುಳ ತಿರುಳ ತಿಳಿಯೋ ನೀ ದುರುಳ,
ತಿಳಿದವರಿಲ್ಲಿ ಇಹರು ವಿರಳಾತಿ ವಿರಳ,
ಅವರಿವರ ಸೊಲ್ಲ ಬಲ್ಲವರಿಲ್ಲಿ ಬಹಳ,
ಆದರವರದೇ ಅಂತರಾಳ ತಿಳಿಯದವರೇ ಹೇರಳ,
ನಿನ್ನಂತರಂಗದಲಿ ಕಾರ್ಮೋಡ ಕವಿದಿದೆ,
ಅದೇ ಅಂತರಂಗದಲಿ ದಿವ್ಯ ಜ್ಯೋತಿ ಬೆಳಗುತಿದೆ,
ಅಂತರಂಗ ಬಹಿರಂಗ ಅದು ಬೇರಿಲ್ಲ ನೀ ಕೇಳ,
ನಿನ್ನ ಮನದ ಮಾತು, ಅದ ಒಮ್ಮೆ ನೀ ಕೇಳ.....

----- tippu -----

- tippu

19 Mar 2023, 10:45 pm

ನಗುಮುಖದ ಅರಸನಿಗೆ ಹುಟ್ಟುಹಬ್ಬದ ಸಂಭ್ರಮ

ಸರಳತೆಯ ಸಾಹುಕಾರ,
ನಗು ಮುಖದ ರಾಜಕುಮಾರ
ಕಲಿಯುಗದ ಕರ್ಣಕುವರ,
ರಾಜ್ಯ ಕಂಡ ಅತ್ಯುನ್ನತ ವ್ಯಕ್ತಿತ್ವದ ಸರದಾರ
ಕರುನಾಡ ಪ್ರತಿ ಹೃದಯದಲ್ಲೂ ಮಾಡುತ್ತಿರುವಿರಿ ರಾಯಭಾರ,
ನಿಮ್ಮ ಪ್ರತಿ ಹೆಜ್ಜೆಗಳಲ್ಲು ಮಾಡಿದ್ದಿರಿ ಮಾನವೀಯತೆಯ ಪ್ರಚಾರ,
ಮನದೆಲ್ಲೇಡೆ ತುಂಬಿಕೊಂಡಿದ್ದೀರಿ" ಕೆಟ್ಟವರಿಗು ಒಳ್ಳೆಯದನ್ನೇ ಬಯಸೋಣ"ಎಂಬ ಒಳ್ಳೆ ವಿಚಾರ
ಎಂದಿಗೂ ಬಯಸಲಿಲ್ಲ ಆಡಂಬರ,
ನಗು ನಗುತ್ತಲೇ ಕರುನಾಡ ಹೃದಯದಲ್ಲಿ ದೇವರಾದ ಧೀರ,
ನಮ್ಮಿ *' ಡಾ. ಪುನೀತ್ ರಾಜಕುಮಾರ".*

- Shankru Badiger

17 Mar 2023, 09:50 pm

ಭಾರತ ರತ್ನ ಜನ್ಮ ದಿನ.

ಸದಾ ಕಾಡುವ ನಗುವಿನ ಒಡೆಯ
ಮನಸ್ಸು ಒಪ್ಪುತ್ತಿಲ್ಲ ನಿಮ್ಮ ಅಗಲಿಕೆಯ ವಿಷಯ.
ಮರೆಯಲಾಗದ ನಿಮ್ಮ ಅಭಿನಯ
ಜಗತ್ತು ಕಂಡ ಅಧ್ಬುತ ವಿಸ್ಮಯ.
ಬಾಡಿ ಹೋಹಿತು ಬೆಟ್ಟದ ಹೂವು
ಮುಗಿಲು ಮುಟ್ಟಿದೆ ಅಭಿಮನಿಗಳ
ನೋವು.
ನಿಮ್ಮ ಮೇಲಿದೆ ಜನರ ಒಲವು
ಯಾಕೆ ಕೊಡಲ್ಲಿಲ್ಲ ಸಾವಿನ ಸುಳಿವು??
ನೊಂದ ಮನಕೆ ನೀವೇ ಹಣತೆ
ಎಲ್ಲರ ಹೃದಯದಲ್ಲೂ ಕುಳಿತೆ
ಮರೆಯಲಾಗದ ನಿಮ್ಮ ಮಾತುಕತೆ
ನೀವಿಲ್ಲದೇ ಆಗಿದೆ ಅಪರ ಚಿಂತೆ....
ಜನುಮ ದಿನದ ಶುಭಾಶಯಗಳು ಪ್ರೀತಿಯ ಅಪ್ಪು ಸರ್. ❤️

- Yogitha T N

17 Mar 2023, 06:08 am

ಮಳೆ

ಮಳೆಯ ಆಗಮನ
ಭುವಿಗೆ ಎಲ್ಲಿಲ್ಲದ ಸಂಭ್ರಮ
ತಂಪಿನ ನೀರ ತಂಪಿಗೆ
ನನ್ನೊಳಗೆ ಖುಷಿಯ ಡಿಂಡಿಮ
ಸೋನೆ ಮಳೆ ಬೀಳುವಾಗ
ಹೃದಯ ಹಾಡಲು
ಮನದ ಸಂತಸ ಕೇಳುವುದೇ ಬೇಡ
ಹೃದಯದ ಹಾಡು ಕೇಳಲು

- Nithyavv

16 Mar 2023, 04:51 pm

ಕನಸು

ತಂಪಾದ ತಂಗಳಿ ಬೀಸುತ್ತಿತ್ತು.
ಹೊನಲು ಬೆಳಕು ಚಿಮ್ಮುತ್ತಿತ್ತು.
ಮೌನಿಯಾಗಿ ಕುಳಿತ್ತಿದ್ದೆ
ಪ್ರೆಯಸಿಯ ದಾರಿ ಕಾಯುತ್ತಿದ್ದೆ.
ಸೂರ್ಯ ಸರಿಯುವ ಹೊತ್ತಲಿ
ನನ್ನವಳು ಬರುತ್ತಿದಳು ಮಬ್ಬಲಿ
ಚಿಕ್ಕ ಕಾಲು ದಾರಿಯಲಿ
ನನ್ನ ನೋಡುವ ಸಂಭ್ರಮದಲಿ.
ಎಲ್ಲೂ ನೋಡದ ಜಾಗವಿದು
ಎಂದು ಕಾಣದ ಕನಸಿದು
ಸುಮ್ಮನೆ ಎನೂ ತಳಮಳ
ಮನಸಲಿ ಎನೋ ಕೋಲಾಹಲ.

ಯೋಗಿತ ಟಿ ಎನ್.


- Yogitha T N

15 Mar 2023, 10:52 pm

ಬೆಳದಿಂಗಳ ಬೆಳ್ಳಿ

ಬೆಳದಿಂಗಳ ಬೆಳ್ಳಿ


ಬೆಳ್ಳಿಯ ಮೋಡದ ತೆರೆಯಲ್ಲಿ 

ಚಲುವ ಚಪಲ ಚೆನ್ನಿಗನೆ ಚಿನ್ನ

ಅವನೇ ನಮ್ಮ ಚಂದಿರಣ್ಣ.


ಮಂದಸ್ಮಿತ ಮುಖದ ಚೆನ್ನ 

ಬರುವ ನೋಡಿ ಹದಿನೈದು ದಿನಗಳೊಮ್ಮೆ.

ಅವನೇ ನಮ್ಮ ಚಂದಿರಣ್ಣ.


ತಾರೆಗಳ ಲಲನೆ ತೋರಣದಿ ಮಧ್ಯ 

ಕಂಗೊಳಿಸುವ ಕಣ್ಮನಿ

ಅವನೇ ನಮ್ಮ ಚಂದಿರಣ್ಣ.


ಅಂಬರವೇರಿ‌‌ ಸುಂದರ ಮೊಗದಿ 

ನಂದಾ ದೀಪದ ನಂದನ ವನದಿ ನಗುತಿಹನು

ಅವನೇ ನಮ್ಮ ಚಂದಿರಣ್ಣ.


ನೀರಿನ‌ ಎಡೆಗೆ ಮುಖ ತೊಳೆಯಲು 

ಬಂದಿಹ ಚಂದಿರ.

ತಿಳಿ ನೀರನಲ್ಲಿ ತನ್ನಯ ಅಂದವ ಕಂಡ 

ಮೂಕಸ್ಮಿತನಾಗಿಹನು 

ಅವನೇ ನಮ್ಮ ಚಂದಿರಣ್ಣ.


ಭೂತಾಯಿ ಮೂಗಿನ ನತ್ತಿನಂತೆ

ಕಂಗೊಳಿಸುವ ಅಮೂಲ್ಯವಾದ ಆಭರಣ

ಅವನೇ ನಮ್ಮ ಚಂದಿರಣ್ಣ.


—ದಸ್ತಗೀರ ನದಾಫ್, ಬೆಳಗಾವಿ

ಮೊ ಸಂ:-9740426796


- DASTAGEER NADAF

14 Mar 2023, 10:04 pm

ವಿಧಿಯಾಟ

ಅನುಭವಿಸು ಪ್ರತಿಕ್ಷಣವ
ಸಂಭ್ರಮಿಸು ಜೀವನವ
ತಿಳಿದಿಹರಾರಿಲ್ಲಿ ನಿನಗೆ
ನಿಗದಿಯಾದ ಸಮಯವ.?

ನಿನ್ನೆ ಇದ್ದ ಶಬ್ದ ಇಂದು ಸ್ಥಬ್ದ
ಮುಪ್ಪಲ್ಲದ ಚರ್ಮಕೂ ಉಪ್ಪಿನ ಉಡುಗೆ
ಕಲ್ಲಿನಂತ ದೇಹಕೂ ಮಣ್ಣಿನ ಹಾಸಿಗೆ
ಸಲಹಿದ ತನುವೆಲ್ಲಾ ಗೆದ್ದಲು ಹುಳುವಿನ ಪಾಲಿಗೆ

ಕೋಟಿ ಕನಸುಗಳ ಕಾಣುವ ಮನವೆ ಕೇಳು
ಕಾಲ ಬಂದಾಗ ಎಲ್ಲವ ತೊರೆದು ಓಟ ಕೀಳು
ಹಗುರವಿರಲಿ ಹೊರುವ ಕನಸುಗಳ ಬುತ್ತಿ
ತೆರಳದಿರಲಿ ಆತ್ಮ ನಿರಾಸೆಯ ಹೊತ್ತು..

ಡಾ. ಅನಿಲ್..

- anil

13 Mar 2023, 11:35 am

ನಿನ್ನೆ ಪ್ರೀತಿಸುವೆ

ಕಾಯಿಸಿ, ಸತಾಯಿಸುವ
ಆಸೆ ಏಕೆ ನಿನ್ನಲಿ..
ಒಲಿದರೂ, ಮುನಿದರೂ
ನೀನೇ ಬೇಕು ನನಗಿಲ್ಲಿ..
ಸಿಹಿ ಕಹಿಗಳು ಏನೇ ಬರಲಿ..
ನೋವು, ನಲಿವಿಗೂ ನೀನೊಬ್ಬ ಸಾಕಿಲ್ಲಿ..
ಮನಸ್ಥಿತಿ, ಪರಿಸ್ಥಿತಿಗಳಲಿ ಅಂತರ ನೂರು...
ಕಾರ್ಯ, ಕಾರಣವಿಲ್ಲ ಪ್ರೀತಿ ಹುಟ್ಟಲು...
ಕಣ್ಣಿನ ರೆಪ್ಪೆಯಂತೆ ಜೊತೆ ಇರುವೆ...
ಹಸ್ತದ ರೇಖೆಯಾಗಿ ನಿನ್ನ ಸೇರುವೆ...
ಹೇ ನನ್ನ ಒಲವೆ.... ನಿನ್ನೇ ಪ್ರೀತಿಸುವೆ...

ತನುಮನಸು✍️

- Tanuja.K

12 Mar 2023, 07:56 pm

ಯಶಸ್ಸು

ಸಾಧನೆಯ ಹಾದಿಯಲಿ
ಸಹನೆ ಸದಾಯಿರಲಿ
ಗುರಿ ಮುಟ್ಟುವರೆಗೂ ನಿಲ್ಲದೆ
ಆತ್ಮ ವಿಶ್ವಾಸದಿ ಸಾಗು ನೀ ಮರೆಯದೆ
ಕಷ್ಟಗಳು ಬಂದರೆ ಸಹಿಸು
ಅನಂತರ ಪಡೆಯುವೆ ನೀ ಯಶಸ್ಸು
ಇದುವೇ ಜೀವನದ ಹುಮ್ಮಸ್ಸು
ಇದನ್ನರಿತು ಸಂತಸದಿ ಜೀವಿಸು.
ಯೋಗಿತ ಟಿ.ಎನ್.

- Yogitha T N

09 Mar 2023, 08:05 am